11/09/2017
ಸತ್ವರೂಪ ಪೌಂಡೇಶನ್ ರವರ ಸಂಸ್ಕೃತಿ ಕಾಲೇಜ್ ಹುಬ್ಬಳ್ಳಿಯ ನಾಟಕ ಕಲೆ ಡಿಪ್ಲೋಮಾ ವಿಭಾಗದ 3ನೇ ವರ್ಷದ ವಿದ್ಯಾಥರ್ಿಗಳಿಗೆ ಹತ್ತು ದಿನಗಳ ಮೌನಾಭಿನಯದ ಕಾರ್ಯಗಾರವನ್ನು ಶ್ರೀಯುತ ವಾಲ್ಟರ್ ಡಿ ಸೋಜಾರವರು ನಡೆಸಿಕೊಟ್ಟರು. ಈ ಹತ್ತು ದಿನಗಳ ಕಾರ್ಯಗಾರದಲ್ಲಿ ಸಾಧ್ಯವಾದ ಕೆಲವು ಮೌನಾಭಿಯದ ತುಣುಕುಗಳನ್ನು ದಿನಾಂಕ 4/9/2017 ರ ಸೋಮವಾರ ಮಧ್ಯಾಹ್ನ 3.15ಕ್ಕೆ ಮತ್ತು ಸಂಜೆ 6:15 ಕ್ಕೆ ಎರಡು ಪ್ರದರ್ಶನಗಳನ್ನು ಎರ್ಪಡಿಸಲಾಗಿತ್ತು. ಪ್ರಾತ್ಯಾಕ್ಷಿಕೆಯನ್ನು ಶಿವವಂದನೆ ಮೂಲಕ ಪ್ರಾರಂಭಿಸಿ ಯಶಸ್ಸಿಗೆ ಭಕ್ತಿಯೊಂದಿದ್ದರೆ ಸಾಲದು, ಪ್ರಯತ್ನವೂ ಬೇಕು ಇಂಬ ಪ್ರಸಂಗ ತೋರಿಸಿದರು. ನಂತರ ಸ್ವಾತಂತ್ರ್ಯ ಪೂರ್ವ ಭಾರತವನ್ನು (ಜಾಲಿಯನ್ವಾಲಾ ಬಾಗ್, ದಂಡಿ ಸತ್ಯಾಗ್ರಹ, 1947 ಸ್ವಾತಂತ್ರ್ಯ ದಿನಾಚರಣೆ)ಮತ್ತು ಸ್ವಾತಂತ್ರೋತ್ತರ ಭಾರತ (ಹಸಿರು ಕ್ರಾಂತಿ, ಕೈಗಾರಿಕಾ ಕ್ರಾಂತಿ, ಶಿಕ್ಷಣ ಕ್ರಾಂತಿ, ಮಾಧ್ಯಮ, ಸಂಪರ್ಕ ಮತ್ತು ವಿಜ್ಞಾನ ಕ್ರಾಂತಿ)ವನ್ನು ಮನಮುಟ್ಟುವಂತೆ ಮೌನಾಭಿನಯದ ಮೂಲತ ತೋರಿಸಿದರು. ಮೂಲ ಮೌನಾಭಿನಯ (Original Mime) ಪ್ರಸ್ತುತಿಯಾಗಿ ಹುಟ್ಟುಹಬ್ಬ ಆಚರಣೆಯ ಪ್ರಸಂಗವನ್ನು ವಿದ್ಯಾಥಿಗಳು ಅಭಿನಯಿಸಿದರು, ಪ್ರದಶರ್ ನವನ್ನು ರಾಷ್ಟ್ರಗೀತೆಯೊಂದಿಗೆ ಪೂರ್ಣಗೊಳಿಸಿದರು. ಈ ಸಂದರ್ಭದಲ್ಲಿ, ಸತ್ವರೂಪ ಪೌಂಡೇಶನ್ನ ಸಿ.ಇ.ಓ ಆದ ಡಾ. ವೀಣಾ ಡೇನಿಯಲ್ ಹೊಸಕೇರಿ, ಟ್ರಸ್ಟೀ ಶ್ರೀಯುತ ಮ್ಯಾಥ್ಯು ಮಧುಕರ್ ಅವರು, ನಿದರ್ೇಶಕರು ಶಿವಯೋಗಿ ಕೆರೂಡಿ, ನಾಟಕ ಕಲೆ ಡಿಪ್ಲೋಮಾ ಸಂಯೊಜಕರಾದ ಶ್ರೀಯುತ ಮಾರಪ್ಪಾ ಬಿ. ಆರ್, ಸಂಸ್ಕೃತಿ ಪ್ರಕಾಶ್ Sanskriti Prakash), ಸಮುದ್ರ ಪಟ್ಟಣಶೆಟ್ಟಿ Samudra Pattanshetti), ವನಿಶಾ ಬಂಗೇರಾ ಹಾಗೂ ಕಾಲೇಜಿನ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು ಅಲ್ಲದೆ ಹುಬ್ಬಳ್ಳಿಯ ಅನೇಕ ರಂಗಾಸಕ್ತರು ಮತ್ತು ಮಾದ್ಯಮ ಮಿತ್ರರು ಕೂಡಾ ಆಗಮಿಸಿದ್ದರು. ಪ್ರಾತ್ಯಾಕ್ಷಿಕಯ ನಂತರ ರಂಗಾಸಕ್ತರು ತಮ್ಮ ಮೆಚ್ಚುಗೆಯನ್ನು ವ್ಯಕ್ತ ಪಡೆಸಿದರು.