Sri dhavala college, moodbidri

Sri dhavala college, moodbidri Sri Dhavala College established in 1979, Initially, only B.A. and B.Com. programmes were offered in the college. B.C.A. in 2005-06.

programme was introduced in 2002-03 and B.B.M. Objectives:
*To create an atmosphere of learning conducive to intellectual, moral and physical development of the students.
*To provide access to higher education to rural youth based on the principles of equity and social justice.
*To provide affordable and quality higher education.
*To develop basic values among students and make them good human bei

ngs.
*To equip the youth with required skills/qualities to face the challenges of life and to mould them into responsible citizens.

18/07/2024

ಕಾಲೇಜಿನ ಪ್ರವೇಶ ರಸ್ತೆಯ ಡಾಂಬರೀಕರಣ ಅರ್ಧಕ್ಕೆ ನಿಂತಿದೆ..ಅದನ್ನು ಪೂರ್ಣ ಮಾಡಲು ಇನ್ನೂ ಸುಮಾರು ಮೂರುಲಕ್ಷ ರೂಪಾಯಿಗಷ್ಟು ಹಣದ ಕೊರತೆ ಉಂಟಾಗಿದೆ, ಕಾಲೇಜಿನ ಮೇಲಿನ. ಅಭಿಮಾನದಿಂದ ನಮ್ಮ ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ಇದು ದೊಡ್ಡ ಮೊತ್ತವಲ್ಲ. ನೀವು ಹಣ ನೀಡಬಯಸಿದರೆ ಕಾಲೇಜಿನ ಪ್ರಾಂಶುಪಾಲರನ್ನು ಸಂಪರ್ಕಿಸಿರಿ.

ಇಷ್ಟು ವರ್ಷಗಳು ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದ ಗೆಳೆಯ ಮಹಾವೀರ ಅಜ್ರಿ ಫೆಭ್ರವರಿ ತಿಂಗಳ ಕೊನೆಯ ದಿನ ನಿವೃತ್ತರಾದರು. ಅಲ್ಪಾವಧಿಗ...
02/03/2024

ಇಷ್ಟು ವರ್ಷಗಳು ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದ ಗೆಳೆಯ ಮಹಾವೀರ ಅಜ್ರಿ ಫೆಭ್ರವರಿ ತಿಂಗಳ ಕೊನೆಯ ದಿನ ನಿವೃತ್ತರಾದರು. ಅಲ್ಪಾವಧಿಗೆ ಪ್ರಾಂಶುಪಾಲರಾಗಿದ್ದರೂ ಕಾಲೇಜಿನ ಬೆಳವಣಿಗೆಯಲ್ಲಿ ಬಹಳಷ್ಟು ಕೊಡುಗೆಯನ್ನು ನೀಡಿದರು ಎಂಬುದು ಉಲ್ಲೇಖನೀಯ ಅಂಶ. ಗೆಳೆಯ ಮಹಾವೀರ ಅಜ್ರಿಯವರ ನಿವೃತ್ತಿಯ ಬದುಕು ಆರೋಗ್ಯಪೂರ್ಣವಾಗಿ ನೆಮ್ಮದಿಯ ತಾಣವಾಗಿರಲಿ ಎಂದು ಆಶಿಸುತ್ತೇನೆ.
ಮಾರ್ಚ್ ಒಂದನೆಯ ತಾರೀಖಿನಿಂದ ಕಾಲೇಜಿನ ಹೊಸಾ ಪ್ರಾಂಶುಪಾಲರಾಗಿ ನನ್ನ ಮತ್ತೊಬ್ಬ ಆತ್ಮೀಯ ಗೆಳೆಯ ಪಾರ್ಶ್ವನಾಥ ಅಜ್ರಿ ಅಧಿಕಾರ ವಹಿಸಿಕೊಂಡಿದ್ದಾರೆ. ಕಾಲೇಜಿನ ಅಭಿವೃದ್ಧಿ ಬಗ್ಗೆ ಹಲವಾರು ಕನಸುಗಳನ್ನು ಕಟ್ಟಿಕೊಂಡಿದ್ದಾರೆ. ಪಾರ್ಶ್ವನಾಥ ಅಜ್ರಿಯವರ ಕನಸು ನನಸಾಗಲಿ. ಅವರಿಂದ ಕಾಲೆಜು ಮತ್ತಷ್ಟು ಅಭಿವೃದ್ಧಿ ಕಾಣಲಿ ಎಂದು ಆಶಿಸುತ್ತೇನೆ.
ಪ್ರೊ. ಎಸ್.ಪಿ. ಅಜಿತ್ ಪ್ರಸಾದ್,
ನಿವೃತ್ತ ಉಪ ಪ್ರಾಂಶುಪಾಲರು

27/11/2023

ನಿದ್ರೆ ಬಾರದೆ ಹೊರಳಾಡುತ್ತಿದ್ದೆ ನಾನು
ತಣ್ಣನೆಯ ಗಾಳಿ ಸೇವಿಸುತ್ತಾ ನದಿಗುಂಟ ನಡೆದೆ
ನೀರವ ರಾತ್ರಿಯಲಿ ಬಿಕ್ಕುವ ದನಿ ಕೇಳಿ
ಚಕಿತನಾಗಿ ನಾ ಅಲ್ಲೇ ನಿಂತೆ
ದೂರದಲಿ ಅಸ್ಪಷ್ಟ ಆಕಾರ ಕಾಣುತಿದೆ,
ನಡುಗುವ ಹೆಜ್ಜೆ ಹಿಡಿದು ನೋಡಿ ಬೆಚ್ಚಿದೆ
ಸರ್ವಾಲಂಕಾರ ಭೂಷಿತ ದಿವ್ಯ ಸ್ತ್ರೀ ಅಳುತಿಹಳು ಅಲ್ಲಿ
"ಯಾರು ನೀ ತಾಯೇ? ಏಕೆ ಈ ದುಃಖ? ಈ ನೋವು?
ತಿರುಗಿ ನೋಡಿದಳೊಮ್ಮೆ ನುಡಿದಳು " ನಾ ಕನ್ನಡ ತಾಯಿ"
"ನನ್ನೊಲುಮೆಯ ತಾಯೆ! ಏಕೆ ಈ ಸಂಕಟ?
ಏಕೆ ಈ ದುಃಖ? ಅಪರಾತ್ರಿಯಲಿ ಏಕಾಂಗಿ ಶೋಕಿಸುತಿಹೆ ಏಕೆ?"
ಹೆತ್ತ ಮಕ್ಕಳ ಅನಾಧರ ಪಡೆದ ತಾಯಿ ಸುಖಿಪಳೇ?"
"ನಿನ್ನ ಮಕ್ಕಳು ನಾವು, ಅನಾಧರಿಸಲೆಂತು ನಿನ್ನ?
ನಿನ್ನ ರಾಜ್ಯದಿ ನೀನೆ ಮರುಗುತಿಹೆ ಏಕಿಂತು?"
"ಎಲ್ಲಿದೆ ನನ್ನ ನಾಡು? ಎಲ್ಲಿದೆ ನನ್ನ ನುಡಿ?
ನನ್ನ ನೆಲ ಜಲವೆಲ್ಲಾ ಪರರ ಸೊತ್ತಾಗಿಹುದು,
ಪಂಪ ರನ್ನರ ಜನ್ನ ಹರಿಹರರ ಕುಮಾರವ್ಯಾಸರ ರತ್ನಾಕರನ ಕಾವ್ಯಸೊಗ ಈಗೆಲ್ಲಿ?
ವಚನ ಕ್ರಾಂತಿ, ದಾಸರಾ ಪದಗಳ ವೈಭವ ಇನ್ನೆಲ್ಲಿ?
ಎಲ್ಲಿ ಅಡಗಿದೆನೃಪತುಂಗನ ಸಾಹಸ?
ಪುಲಿಕೇಶಿಯ ಪರಾಕ್ರಮ, ರಣಧೀರನಾ ಆರ್ಭಟ?
ಹೆತ್ತಬ್ಬೆಯ ನುಡಿಯ ಆಡಲೊಲ್ಲರು ನನ್ನ ಮಕ್ಕಳು,
ತಮ್ಮ ಹೆಸರ ನನ್ನ ಮೂಲಕ ಬರೆಯಲೊಲ್ಲರು,
ನನ್ನ ಸಾಹಿತ್ಯ ಇಂದವರಿಗೆ ಬೆಡವಾಗಿದೆ
ನನ್ನ ನೆಲವೆಂದರೆ ಬರಿಯ ನೆಲವಲ್ಕ, ಅದು ಸ್ವರ್ಗ
ಇಂದಾಗಿದೆ ಅದು ಭೂಗಳ್ಳರ ನೆರೆಮ‌ನೆ
ನನ್ನ ಕಾಜಾಣ ಅಳಿಯುತಿದೆ, ಪ್ರಾಣಿ ಪಕ್ಷಿಗಳು ನಶಿಸುತಿದೆ,
ಶ್ರೀಗಂಧದ ತರುವೆಲ್ಲಾ ಕೊಡಲಿಗಳಿಗಾಹಾರವಾಗುತಿದೆ
ನನ್ನತನ, ತನ್ನತನ, ಕಳೆದುಕೊಂಡಿಹರು ನನ್ನ ಮಕ್ಕಳು
ದುಃಖಿಸದೇ ಎಂತಿರಲಿ ನಾನು? ಸುಖಿಸಲೇ ಈಗಿನ್ನು?
ನಾಚಿಕೆಯಿಂದ ತಲೆ ತಗ್ಗಿಸಿ ನಾ ನುಡಿದೆ
ಅಮ್ಮ, ನಿನ್ನ ಮಕ್ಕಳು ನಾವು, ಹೆತ್ತಬ್ಬೆಯ ಮರೆತೆವು
ಕ್ಷಮೆ ಇರಲಿ ತಾಯೇ ನಿನ್ನ ಮಕ್ಕಳ ಮೇಲೆ
ಅರಿತರಿತೂ ತಪ್ಪಿ ನಡೆದೆವು ನಾವು, ಮರೆತು ಬಾಳಿದೆವು
ಆ ಹನುಮನಂತೆ ನಮ್ಮ ಶಕ್ತಿಯ ನಾವೇ ಮರೆತೆವು
ಚಿಂತಿಸದಿರು ತಾಯೇ ಮುಂದೆ ಇದೆ ಸುವರ್ಣಪಥ
ಸ್ವಾಭಿಮಾನದ ಹೆಜ್ಜೆಯ ಮೊದಲಿಡುವೆವು
ನಿನ್ನ ಕಾಡುವ ಅನ್ಯರ ಹೊರಗಟ್ಟುವೆವು
ನಿನ್ನ ಪಾದವ ನಂಬಿ ಮುನ್ನಡಿ ಇಡುವೆವು
ಹರಸು ತಾಯೇ ನಿನ್ನ ಮಕ್ಕಳನು"
ತಾಯಿ ನಕ್ಕಳು ಅಮೃತಕರೆವ ತನ್ನ ಕರವ ಸೋಂಕಿಸಿದಳು ಎನ್ನ ಶಿರಕೆ
ಬೆಳಕಿನ ಕಿರಣದಲಿ ಕರಗಿ ಹೋದಳು ತಾಯಿ
ನಾನಲ್ಲೇ ನಿಂತೆ ಮನ
( ಭಾನುವಾರ ನಡೆದ ಅಂತರ್ಜಾಲ ಮೂಲದ ಕವಿಗೋಷ್ಠಿಯಲ್ಲಿ ಅಧ್ಯಕ್ಷನ ನೆಲೆಯಲ್ಲಿ ವಾಚಿಸಿದ್ದು. ಇದನ್ನು 'ಕವಿತೆ' ಎಂದು ನೀವೆಲ್ಲರೂ ಒಪ್ಪಿದರೆ ಆಯಿತು. ಆಧುನಿಕ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಪ್ರಸಿದ್ಧವಾದ ಕವಿತೆಯೊಂದರ ದುರ್ಬಲ ನಕಲು ಇದು. ಮೂಲ ಯಾವುದಿರಬಹುದೆಂದು ಊಹಿಸಬಲ್ಲಿರೆ ಜಾಣ ಓದುಗರು.?)

ಸುಮಾರು ಏಳೆಂಟು ವರ್ಷದ ಆ ಹುಡುಗ ತನ್ನ ಅಣ್ಣನ ಜೊತೆಗೆ ಶಾಲೆಗೆ ಹೋಗುತ್ತಿದ್ದ. ಅವನ ಅಪ್ಪ ಧಣಿಗಳ ಗದ್ದೆಯ ಕೆಸರಲ್ಲಿ ದುಡಿಯುತ್ತಿದ್ದರು. ಅವರ ಧಣ...
06/01/2023

ಸುಮಾರು ಏಳೆಂಟು ವರ್ಷದ ಆ ಹುಡುಗ ತನ್ನ ಅಣ್ಣನ ಜೊತೆಗೆ ಶಾಲೆಗೆ ಹೋಗುತ್ತಿದ್ದ. ಅವನ ಅಪ್ಪ ಧಣಿಗಳ ಗದ್ದೆಯ ಕೆಸರಲ್ಲಿ ದುಡಿಯುತ್ತಿದ್ದರು. ಅವರ ಧಣಿ ಶಾಲೆಗೆ ಹೋಗುತ್ತಿದ್ದ ಮಕ್ಕಳನ್ನು ನೋಡಿ "ನೀವು ಹೋಗೋದು ಎಲ್ಲಿಗೆ?" ಅಂತ ಕೇಳಿದಾಗ ಮುಗ್ಧ ಮಕ್ಕಳು ಶಾಲೆಗೆ ಅಂತ ಉತ್ತರಿಸುತ್ತಾರೆ. ಕೋಪಗೊಂಡ ಧಣಿ "ನೀವ‌್ಯಂತಕೆ ಶಾಲೆಗೆ ಹೋಗೋದು, ಅಪ್ಪನ ಜೊತೆಯಲ್ಲಿ ದುಡಿಯೋಕೆ ಬನ್ನಿ" ಅಂತ ಸಿಟ್ಟಿನಿಂದ ಗದ್ದೆಯ ಕೆಸರನ್ನು ಎರಚುತ್ತಾರೆ.ಮಕ್ಕಳ ಬಟ್ಟೆ ಎಲ್ಲಾ ಕೆಸರುಮಯ ಆಯಿತು. ಆ ಮನೆಯಲ್ಲಿ ಬಡತನ ಇದೆ. ಬಟ್ಟೆ ಬದಲಿಸಲು ಮತ್ತೊಂದು ಜೊತೆ ಬಟ್ಟೆ ಇರಲಿಲ್ಲ. ಅಪ್ಪ ಮೌನವಾಗಿ ಮಕ್ಕಳ ಬಟ್ಟೆಯ ಕೆಸರನ್ನು ತೊಳೆದು ಶಾಲೆಗೆ ಹೋಗಿ ಮಕ್ಕಳು ಅಂತ ಕಳಿಸಿಕೊಟ್ಟ. ಆ ಹುಡುಗ ಮೌನವಾಗಿ, ದುಃಖವನ್ನು ನುಂಗಿಕೊಂಡ. ಆದರೆ ಮನಸ್ಸಿನಲ್ಲಿ ಒಂದು ಹಠ ಮೂಡಿತು. ಧಣಿಯ ಬಗ್ಗೆ ದ್ವೇಷದ ಭಾವ ಬರಲಿಲ್ಲ. ಆದರೆ ಬದುಕಲ್ಲಿ ಏನಾದರೂ ಸಾಧಿಸಲೇ ಬೇಕು ಎಂಬ ಹಠ ಮೂಡಿತು.
ಇವತ್ತು ಆ ಹುಡುಗ ಏರಿರುವ ಎತ್ತರ ನಿಜಕ್ಕೂ ಆ ಹುಡುಗನ ಬಾಯಿಯಲ್ಲಿ ಕೇಳಿ ರೋಮಾಂಚಿತನಾದೆ. "ಜೀವನದಲ್ಲಿ ಅಪಮಾನಗಳು ಆದಾಗ ಅಪಮಾನಿಸಿದವರೇ ಕೊನೆಗೊಮ್ಮೆ ಬಾಯಿತುಂಬ ಹೊಗಳುವ ಹಾಗೆ ಸಾಧಿಸುವ ಛಲ ಇರಬೇಕು" ಎಂದು ಅ ಸಾಧಕ ಮನಸ್ಸು ತುಂಬಿ ಹೇಳುವಾಗ ಇಡೀ ವಿದ್ಯಾರ್ಥಿ ಸಮುದಾಯ ಮೌನವಾಗಿ, ಆ ಮಾತನ್ನು ಕೇಳುತ್ತಿದ್ದರು. "ನನಗೀಗ ಆ ನನ್ನ ಧಣಿಯ ಬಗ್ಗೆ ದ್ವೇಷದ ಭಾವವನ್ನು ಹೊಂದಿಲ್ಲ. ಅಂದು ಅವರು ಮಾಡಿದ ಆ ಅಪಮಾನವೇ ನನ್ನನ್ನು ಈ ಮಟ್ಟಕ್ಕೆ ಬೆಳಸಿದೆ ಅಂತ ಹೇಳುವಾಗ ನನಗೆ ಅರಿವಿಲ್ಲದಂತೆಯೇ ಮನಸ್ಸು ತುಂಬಿಬಂದಿತು.
ಇವತ್ತು ಮೂಡುಬಿದಿರೆ ಶ್ರೀ ಧವಲಾ ಮಹಾ ವಿದ್ಯಾಲಯದ ಲಲಿತ ಕಲಾ ಸಂಘದ ಆಶ್ರಯದಲ್ಲಿ " ಧವಲಾ ಸಿರಿ" ಸಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ ನಡೆಯುತ್ತಿದೆ. ಹತ್ತು ವರ್ಷರ್ ಹಿಂದೆ "ಧವಲಾ ಸಿರಿ" ಪರಿಕಲ್ಪನೆ ಮಾಡಿ, ಅದನ್ನು ಮೂರು ವರ್ಷಗಳ ಕಾಲ ಅದನ್ನು ನಡೆಸಿಕೊಟ್ಡವನು ನಾನು. ಧವಲಾ ಸಿರಿ ನನ್ನ ಭಾವನಾತ್ಮಕ ಕೂಸು. ಕೆಲವು ಕಾಲ ಕಾರಣಾಂತರಗಳಿಂದ ನಿಂತು ಹೋದದ್ದು ಇದೀಗ ಪುನಃ ಪ್ರಾರಂಭ ಆಗಿದೆ. ಈ ಕಾರ್ಯಕ್ರಮದಲ್ಲಿ ಮೇಲಿನ ಮಾತನ್ನು ಆಡಿ ಎಲ್ಲರ ಮನಸ್ಸನ್ನು ಗೆದ್ದವರು ಮೂಡುಬಿದಿರೆ ಶಾಸಕರಾಗಿರುವ ಉಮಾನಾಥ ಕೋಟ್ಯಾನ್ ಅವರು. ನಾನು ರಾಜಕಿಯದ ಬಗ್ಗೆ ಅಸಕ್ತನಲ್ಲ. ಆದರೆ ಕೊಟ್ಯಾನ್ ಅವರ ಮಾತುಗಳು ಎಲ್ಲರಿಗೂ ಸ್ಪೂರ್ತಿ ತುಂಬುವಂತಹದ್ದು. ದಯವಿಟ್ಟು ಇದನ್ನು ರಾಜಕೀಯ ದೃಷ್ಟಿಯಿಂದ ನೋಡದೆ ಕಡುಬಡತನದ ಹಿನ್ನೆಲೆಯಲ್ಲಿ ಬಂದ ಹುಡುಗ ಇಂದು ಏರಿದ ಎತ್ತರ ಎಲ್ಲರಿಗೂ ಮಾದರಿ ಎನ್ನುವ ದೃಷ್ಟಿಯಿಂದ ನೋಡಿ. ಈ ಪುಟ್ಟ ಟಿಪ್ಪಣಿ ಜೀವನದಲ್ಲಿ ಏನನ್ನಾದರೂ ಸಾಧಿಸಲು ಬಯಕೆ ಇದ್ದವರಿಗಾಗಿ ಬರೆದಿರುವೆ.

https://youtu.be/dQKQMRIg-S0
21/09/2022

https://youtu.be/dQKQMRIg-S0

A Film by GK photography moodbidribook your ordercantact call - 845363001 / 9606435291photo by : photography booking are available....For wedd...

16/07/2022

ನಿನ್ನೆಯ ದಿನ ನನ್ನ ಮಟ್ಟಿಗಂತೂ ಸ್ಮರಣೀಯವಾಗಿತ್ತು. ೨೦೧೬ರಲ್ಲಿ ವೃತ್ತಿಯಿಂದ ನಿವೃತ್ತಿಹೊಂದಿದ ನಂತರ ನನಗೆ ಈ ಇಷ್ಟು ವರ್ಷಗಳಲ್ಲಿ ಬಹುಶಃ ಮೂರು ನಾಲ್ಕು ಸಲ ಕಾಲೇಜಿಗೆ ಹೋಗಿರಬಹುದು. ಆಹ್ವಾನವಿಲ್ಲದೇ ಎಲ್ಲಿಗೂ ಹೋಗುವವ ನಾನಲ್ಲ. ನಿನ್ನೆ ಕಾಲೇಜಿನ ಎನ್.ಎಸ್.ಎಸ್. ಘಟಕದ ವಿದ್ಯಾರ್ಥಿಗಳಿಗೆ "ಮನುಷ್ಯ ಸಂಬಂಧಗಳ ಪುನರ್ ಸ್ಥಾಪನೆ" ವಿಷಯದ ಬಗ್ಗೆ ಒಂದು ತರಬೇತಿ ಕಾರ್ಯಕ್ರಮ ನೀಡಬೇಕೆಂದು ಮಿತ್ರರಾದ ಎನ್.ಎಸ್.ಎಸ್. ಅಧಿಕಾರಿ ಸಂತೋಷ್ ಶೆಟ್ಟಿ ಅವರು ನೀಡಿದ್ದ ಆಹ್ವಾನದ ಮೇರೆಗೆ ಹೋಗಿದ್ದೆ. ಬಹಳ ಸಮಯದ ನಂತರ ಕಾಲೇಜಿಗೆ ಹೋಗುವುದು, ಅಲ್ಲಿ ವಿದ್ಯಾರ್ಥಿಗಳೊಡನೆ ಸಂವಾದ ನಡೆಸುತ್ತಾ ತರಬೇತಿ ನೀಡುವುದು ನನ್ನ ಮಟ್ಟಿಗಂತೂ ಅತ್ಯಂತ ಖುಷಿ ಕೊಟ್ಟ ವಿಚಾರ. ಕಳಪೆ ದ ಎನ್.ಎಸ್. ಎಸ್. ಕ್ಯಾಂಪ್ ಅಲ್ಲಿಗೂ ಹೋಗಿ ಒಂದು ಕಾರ್ಯಕ್ರಮ ನೀಡಿಬಂದಿದ್ದೆ. ಶಿಬಿರದಲ್ಲಿ ಭಾಗವಹಿಸಿದ್ದ ಮಕ್ಕಳು ನಂತರ ಎದಿರಿಗೆ ಸಿಕ್ಕಾಗ ಪ್ರೀತಿಯಿಂದ, ಅಭಿಮಾನದಿಂದ ನನಗೆ ನಮಸ್ಕಾರ ಮಾಡುತ್ತಿದ್ದರು. ಆ ಎನ್.ಎಸ್.ಎಸಗ. ಶಿಬಿರಾರ್ಥಿ ಮಕ್ಕಳಲ್ಲಿ ಹಲವರು ನಿನ್ನೆಯ ಕಾರ್ಯಕ್ರಮದಲ್ಲಿಯೂ ಭಾಗವಹಿಸಿದ್ದರು. ಇದು ಒಂದು ರೀತಿಯಲ್ಲಿ ನನಗೆ ತವರಿಗೆ ಬಂದ ಮಗಳ ಸಂಭ್ರಮಕ್ಕೆ ಸಾಕ್ಷಿಯಂತಿತ್ತು. ಆ ಸುಂದರವಾದ ಕ್ಷಣಕ್ಕೆ ಸಾಕ್ಷಿಯಾದ ಕೆಲವು ಚಿತ್ರಗಳು ಇಲ್ಲಿವೆ.
ಪ್ರೊ. ಎಸ್.ಪಿ. ಅಜಿತ್ ಪ್ರಸಾದ್.

ನಿನ್ನೆ ಗೆಳೆಯ ಡಾಕ್ಟರ್ ಸುದರ್ಶನ್ ಕುಮಾರ್ ತಮ್ಮ ಸೇವಾ ನಿವೃತ್ತಿ ಪಡೆದುಕೊಂಡರು. ಕಳೆದ ೩೬ ವರ್ಷಗಳಿಂದ ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕರಾಗಿ, ...
01/06/2022

ನಿನ್ನೆ ಗೆಳೆಯ ಡಾಕ್ಟರ್ ಸುದರ್ಶನ್ ಕುಮಾರ್ ತಮ್ಮ ಸೇವಾ ನಿವೃತ್ತಿ ಪಡೆದುಕೊಂಡರು. ಕಳೆದ ೩೬ ವರ್ಷಗಳಿಂದ ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕರಾಗಿ, ವಿಭಾಗ ಮುಖ್ಯಸ್ಥರಾಗಿ ಸೇವೆ ಸಲ್ಲಿದ್ದರು. ಕಳೆದ ಎರಡು ವರ್ಷಗಳಿಂದ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದರು. ಅವರ ನಿವೃತ್ತಿ ಜೀವನವು ನೆಮ್ಮದಿಯಿಂದ ಕೂಡಿರಲಿ ಎಂದು ಹಾರೈಸುತ್ತೇನೆ.
ಕಳೆದ ಇಪ್ಪತ್ತೆಂಟು ವರ್ಷಗಳಿಂದ ವಾಣಿಜ್ಯ ಶಾಸ್ತ್ರ ಉಪನ್ಯಾಸಕರಾಗಿ, ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀಯುತ ಮಹಾವೀರ ಅಜ್ರಿ ಅವರು ಇಂದು ಕಾಲೇಜಿನ ನೂತನ ಪ್ರಾಂಶುಪಾಲರಾಗಿ ನೇಮಕಗೊಂಡಿದ್ದಾರೆ. ಅಭಿನಂದನೆಗಳು ಮತ್ತು ಶುಭಾಶಯಗಳು ಮಿತ್ರ ಮಹಾವೀರ್ ಅಜ್ರಿ ಅವರಿಗೆ.

ಪ್ರಾಧ್ಯಾಪಕ ಹುದ್ದೆಯಿಂದ ನಿವೃತ್ತನಾಗಿ ಆರು ವರ್ಷಗಳೇ ಕಳೆದು ಹೋದವು. ಇಂದಿಗೂ ನಾನು ನಿವೃತ್ತ ಅಂತ ಅನ್ನಿಸುತ್ತಲೇ ಇಲ್ಲ.
19/02/2022

ಪ್ರಾಧ್ಯಾಪಕ ಹುದ್ದೆಯಿಂದ ನಿವೃತ್ತನಾಗಿ ಆರು ವರ್ಷಗಳೇ ಕಳೆದು ಹೋದವು. ಇಂದಿಗೂ ನಾನು ನಿವೃತ್ತ ಅಂತ ಅನ್ನಿಸುತ್ತಲೇ ಇಲ್ಲ.

Address

D. K. Dist. State
Moodbidri
574227

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 1pm

Telephone

08258-236243

Alerts

Be the first to know and let us send you an email when Sri dhavala college, moodbidri posts news and promotions. Your email address will not be used for any other purpose, and you can unsubscribe at any time.

Contact The University

Send a message to Sri dhavala college, moodbidri:

Share