Modern Education Society's M. M. Arts & Science College, Sirsi

  • Home
  • India
  • Sirsi
  • Modern Education Society's M. M. Arts & Science College, Sirsi

Modern Education Society's M. M. Arts & Science College, Sirsi This is the official page for exhibiting our institutions' various activities.

11/12/2025
Modern Education Society's M. M. Arts & Science College, Sirsi@ #
14/11/2025

Modern Education Society's M. M. Arts & Science College, Sirsi@ #

Urgent & Important (MIC-Driven Activity)Orientation Session on IIC 8.0 Calendar & R&D Cell Activities for AY 2025–26Date...
21/10/2025

Urgent & Important (MIC-Driven Activity)

Orientation Session on IIC 8.0 Calendar & R&D Cell Activities for AY 2025–26
Date: 22nd October 2025
Time: 4:00 PM
Address by: Hon’ble Chairman, AICTE, Prof. T. G. Sitharam

Dear IIC Presidents, Convenors, Faculty, Students & Innovation Ambassadors,

All Higher Education Education Institutions with established IICs are invited to join this mandatory online Orientation Session on IIC 8.0 & R&D Cell Activities for AY 2025–26.

Youtube Live Stream Link: https://www.youtube.com/live/aBqZVcZceVg

This session is an excellent opportunity for new & inactive IICs to understand the IIC framework and begin IIC 8.0 systematically.

Instructions for IIC Institutions:
- Schedule in Seminar Hall, Conference Room where council members, Innovation Ambassadors and other students & faculty can sit together and participate.
- Mark this as an MIC-driven activity under IIC 8.0.
- Kindly share participation updates in your zonal WhatsApp group & on social media tagging AICTE, MIC, and MoE.
- Post-event, prepare report that can be submitted on the IIC Portal (Activity Submission Format) once IIC 8.0 activities scheduled.

Invitation to Join the Orientation Session for all IIC Institutions on IIC8.0 Calendar Activity & R&D Cell activity for the AY 2025-26. Hon’ble Chairman of A...

15/10/2025
Out students achievement at IIC Regional Meet at KLE Technological University Hubballi, held on 19th January 2024. Our s...
29/09/2024

Out students achievement at IIC Regional Meet at KLE Technological University Hubballi, held on 19th January 2024. Our students presented their unique model "Prapthi" works based on Augmented Reality and Virtual reality.

IIC Regional Meet Participation at KLE Technological University Hubballi, on 19th January 2024.

Viksat Bhart @2047 Utsav
29/09/2024

Viksat Bhart @2047 Utsav

The online address of PM Modi was held on 11th December 2024. The session was organized at MMC Sirsi on 11th December 2024.

ವಿಜ್ಞಾ(ಪ)ನವಾಸನಾಲಜಿ- ಭಾಗ-24“ಪರಿಮಳ ಸಂದೇಶ-2”ಈ ಸಂಚಿಕೆಯೊಂದಿಗೆ ‘ವಾಸನಾಲಜಿ’ ಎರಡನೇ ವರ್ಷದವರೆಗೆ ಪಸರಿಸಿದಂತಾಗಿದೆ! ವಾಸನಾವಿಶೇಷಗಳು ಅಕ್ಷಯ...
16/09/2024

ವಿಜ್ಞಾ(ಪ)ನ
ವಾಸನಾಲಜಿ- ಭಾಗ-24
“ಪರಿಮಳ ಸಂದೇಶ-2”

ಈ ಸಂಚಿಕೆಯೊಂದಿಗೆ ‘ವಾಸನಾಲಜಿ’ ಎರಡನೇ ವರ್ಷದವರೆಗೆ ಪಸರಿಸಿದಂತಾಗಿದೆ! ವಾಸನಾವಿಶೇಷಗಳು ಅಕ್ಷಯವೆನಿಸುವಷ್ಟು ಮೊಗೆದಷ್ಟೂ ಹೊಮ್ಮುತ್ತಿದೆ. ಈ ಬರಹದ ಭಾಗವಾದ ಫೆರೋಮೋನ್ಗಳ ಕುರಿತೂ ಸಾಕಷ್ಟು ಕುತೂಹಲಕಾರಿ ಸಂಶೋಧನೆಗಳು ಆಗಿವೆ, ಮತ್ತು ಆಗುತ್ತಲೇ ಇವೆ. ಹಿಂದಿನ ಸಂಚಿಕೆಯಲ್ಲಿ ವಿವರಿಸಿದ್ದಂತೆ ಅಗಾಧವಾದ ರಾಸಾಯನಿಕ ಸಂವಹನೆ ‘ಸೆಮಿಯೋಕೆಮಿಕಲ್’ನ ಒಂದು ಭಾಗವಾದ ಈ ‘ಫೆರೋಮೋನ್’ಗಳು- ‘ಜೀವಿಗಳ ಸಜಾತೀಯ ಸದಸ್ಯರಲ್ಲಿ ಒಂದು ನಿರ್ದಿಷ್ಟ ಸಾಮಾಜಿಕ ಪ್ರತಿಕ್ರಿಯೆಯ್ನು ಪ್ರಚೋದಿಸಲು, ಐಚ್ಛಿಕವಾಗಿ ದೇಹದ ಹೊರಗೆ ಸ್ರವಿಸಲ್ಪಡುವ ಆವಿಶೀಲ ರಾಸಾಯನಿಕ’. ದೇಹದ ಒಳಗೆ ನಿರ್ದಿಷ್ಟ ಕಾರ್ಯಪ್ರಚೋದನೆಗೆ ಅನೈಚ್ಛಿಕವಾಗಿ ಸ್ರವಿಸಲ್ಪಡುವ- ಹಾರ್ಮೋನಿನಂತೆಯೆ ‘ಫೆರೋಮೋನ್’ ಕೂಡ ಅತ್ಯಂತ ಕಡಿಮೆ ಪ್ರಮಾಣದಲ್ಲಿ ನಿಖರವಾಗಿ ಕೆಲಸಮಾಡಬಲ್ಲ ಸಾಮರ್ಥ್ಯ ಹೊಂದಿರುವುದು ವಿಶೇಷ. ಕಾರ್ಲ್ಸನ್ ಹಾಗೂ ಲೂಷರ್ರವರ ಪ್ರಕಾರ ‘ಫೆರೋಮೋನ್’ಗಳು ಸಾಮಾನ್ಯವಾಗಿ ಮೂಗಿನ ‘ಘ್ರಾಣ’ ಅಥವಾ ನಾಲಗೆಯ ‘ರಸನೆ’ಯಮೂಲಕ ಕೆಲಸಮಾಡಬಲ್ಲ ಆವಿಶೀಲ ರಾಸಾಯನಿಕಗಳು. ಅಂದರೆ ಜೀವಿಯು ತನ್ನ ಮಲ/ಮೂತ್ರದ ಮೂಲಕ, ಅಥವಾ ಇದಕ್ಕಾಗಿಯೇ ಇರುವ ವಿಶೇಷ ಗ್ರಂಥಿಗಳಿಂದ ಫೆರೋಮೋನ್ಗಳನ್ನು ಹೊರಗೆ ಸ್ರವಿಸುತ್ತವೆ. ಆದರೆ ತೀರ ಅಪರೂಪದ ಅಪವಾದವೆಂಬಂತೆ ಗೆದ್ದಲು ಹುಳುಗಳಲ್ಲಿನ ಒಂದು ಫೆರೋಮೋನ್ ಇನ್ನೊಂದಕ್ಕೆ ತೂರಿಸಲ್ಪಡುವುದರಮೂಲಕ ಕಾರ್ಯನಿರ್ವಹಿಸುತ್ತದೆ. ಕೆಲಸಗಾರಗೆದ್ದಲು ಸೈನಿಕಗೆದ್ದಲಿಗೆ ಊಟ ಉಣಿಸುವುದರೊಂದಿಗೆ ತನ್ನ ಜೊಲ್ಲಿನಲ್ಲಿರುವ ಟಿ.ಎಸ್.ಡಿ. ಫೆರೋಮೋನ್"Trophallaxis-induced soldier-destabilizing pheromone")) ಅನ್ನು ನೇರವಾಗಿ ಅದರ ದೇಹಕ್ಕೆ ಚುಚ್ಚಿ ತೂರಿಸಿಬಿಡುತ್ತದೆ!

ದೊಡ್ಡ ಗುಂಪಿನಲ್ಲಿ ಜೀವಿಸುವ ಸಂಕೀರ್ಣ ಸಾಮಾಜಿಕ ವ್ಯವಸ್ಥೆಯನ್ನು ಹೊಂದಿದ ಜೀವಿಗಳಿಗೆ ‘ಯುಸೋಶಿಯಲ್’(‘Eusocial animals’) ಜೀವಿಗಳೆಂದು ಹೆಸರಿಸಲಾಗಿದೆ. 1966ರಲ್ಲಿ ‘ಸುಝಾನಾ ಬಾತ್ರಾ’ ಎಂಬ ಜೀವಶಾಸ್ತ್ರ ವಿಜ್ಞಾನಿ ಈ ಹೆಸರನ್ನಿಟ್ಟರು. ‘Eu’ ಎಂಬ ಗ್ರೀಕ್ ಪದಕ್ಕೆ ‘ಒಳ್ಳೆಯ’ ಅಥವಾ ‘ನಿಜವಾದ’ ಎಂದರ್ಥ. ವಿವಿಧ ಜಾತಿಯ ಇರುವೆ, ಗೆದ್ದಲು, ಕಣಜ, ಜೇನುಗಳು ಈ ಸಂಕೀರ್ಣ ಸಾಮಾಜಿಕವಾದ ‘ಯುಸೋಶಿಯಲ್’ ಜೀವಿಗಳಿಗೆ ಉದಾಹರಣೆಗಳು. ಯಾವುದಾದರೊಂದು ರೀತಿಯ ನಿಖರ ಹಾಗೂ ವ್ಯವಸ್ಥಿತವಾದ ಪರಸ್ಪರ ಸಂವಹನ ಮಾಧ್ಯಮವಿಲ್ಲದೆ ಈ ವಿಶಿಷ್ಟ ಸಾಮಾಜಿಕ ಜೀವಿಗಳು ಅಪಾರಸಂಖ್ಯೆಯಲ್ಲಿ ಒಟ್ಟಾಗಿ ಯಾವುದೇ ಗೊಂದಲ, ಆಂತರಿಕ ಕಲಹವಿಲ್ಲದೆಯೆ ಬದುಕಲು ಸಾಧ್ಯವೇ ಇಲ್ಲ. ವಿಶೇಷವೆಂದರೆ ಈ ಎಲ್ಲಾ ‘ಯುಸೋಶಿಯಲ್’ ಜೀವಿಗಳಲ್ಲಿ ಸಂಕೀರ್ಣ ಸಂವಹನ ಸಾಧ್ಯವಾಗುವುದು ಅವುಗಳಲ್ಲಿ ವಿಕಸಿತವಾದ ವಿವಿಧ ಫೆರೋಮೋನ್ಗಳಿಂದಾಗಿಯೆ ಆಗಿದೆ. ಅಂದರೆ ವಿವಿಧ ಬಗೆಯ ಫೆರೋಮೋನ್ಗಳ ವ್ಯವಸ್ಥಿತ ಬಳಕೆ ಸಾಧ್ಯವಾದುದರಿಂದಲೆ ಇವು ‘ಯುಸೋಸೋಷಿಯಲ್’ ಜೀವಿಗಳೆಂದು ಪರಿಗಣಿತವಾಗಿವೆ.

ವಿವಿಧ ಬಗೆಗಳ ಫೆರೋಮೋನ್ಗಳ ಕುರಿತು ವಿವರವಾಗಿ ತಿಳಿಯುವ ಪೂರ್ವದಲ್ಲಿ ಹಿಂದಿನ ಭಾಗದಲ್ಲಿ ಉಲ್ಲೇಖಿಸಿದ್ದ ‘ವಾಸನಾ ಗುರುತು(Signature odor) ಅಥವಾ ‘ಅನನ್ಯ ಪರಿಮಳ’ ಹಾಗೂ ‘ಫೆರೋಮೋನ್’ಗಳಿಗಿರುವ ವೈತ್ಯಾಸವನ್ನು ಸ್ಪಷ್ಟಮಾಡಿಕೊಳ್ಳೋಣ. ಜೀವಿಗಳಿಗೆ ಅದರದ್ದೇ ಆದ ವಿಶಿಷ್ಟ ‘ವಾಸನಾ ಗುರುತು’ ಇರುತ್ತದೆಂದು ಹಿಂದಿನ ಸಂಚಿಕೆಯಲ್ಲಿ ಉಲ್ಲೇಖಿಸಲಾಗಿತ್ತು.

ಭೂಮಿಯ ಮೇಲಿನ ಪ್ರತಿಯೊಂದು ಜೀವಿಯೂ ಅನನ್ಯ. ತನ್ನದೇ ಜಾತಿಯ ಇನ್ನೊಂದು ಜೀವಿಯೊಂದಿಗಿನ ಬಹುತೇಕ ಸಾಮ್ಯತೆಗಳ ನಡುವೆಯೂ ಪ್ರತ್ಯೇಕವಾದ, ಭಿನ್ನವೆನಿಸುವ ‘ವೈಯಕ್ತಿಕ ಗುರುತು’ ಇರುತ್ತದೆಂಬುದು ಈ ಸೃಷ್ಟಿಯ ವೈಚಿತ್ರ್ಯ. ಮೇಲ್ವರ್ಗದ ಜೀವಿಗಳಾದ ಸಸ್ತನಿಗಳಲ್ಲಿ ಇಂಥಹ ಪ್ರತ್ಯೇಕ ವೈಯಕ್ತಿಕ ಗುರುತು ಮೇಲ್ನೋಟಕ್ಕೇ ಸ್ಪಷ್ಟವಾಗಿ ಗೋಚರಿಸುತ್ತದೆ. ಆದರೆ ದೊಡ್ಡ ಗುಂಪುಗಳಲ್ಲಿ ವಾಸಿಸುವ, ಮೇಲೆ ಹೇಳಿದ ‘ಯುಸೋಸೋಷಿಯಲ್’ ಜೀವಿಗಳಲ್ಲೂ ವೈಯಕ್ತಿಕ ಪ್ರತ್ಯೇಕತೆ ಇದ್ದೀತೆ? ಎನ್ನುವುದಕ್ಕೆ ‘ಹೌದು’, ಎನ್ನುವುದು ಉತ್ತರ! ಅಂದರೆ ಒಂದು ಇನ್ನೊಂದರ, ಅಥವಾ ಎಲ್ಲವೂ ಪರಸ್ಪರ ‘ಝೆರಾಕ್ಸ್ ಪ್ರತಿ’ಗಳಂತೆ ಗೋಚರಿಸುವ ಇರುವೆ, ಗೆದ್ದಲು, ಜೇನು ಮುಂತಾದ ಜೀವಿಗಳೂ ತಮ್ಮ ಉಪಜಾತಿಗಳ ನಿಖರ ಸಾಮ್ಯತೆಯ ನಡುವೆಯೂ ವೈಯಕ್ತಿಕ ಭಿನ್ನಗುರುತು ಹೊಂದಿರುತ್ತವೆ. ಸಾಲಿನಲ್ಲಿ ಒಂದಾಗಿ ಓಡುವ, ‘ಗುಂಪಿನಲ್ಲಿ ಗೋವಿಂದ’ ಎಂಬಂತೆ ಒಂದೇರಿತಿಯ ಕೆಲಸ, ದಿನಚರಿಯಲ್ಲಿ ನಿರತವಾಗಿರುವ ಇಂತಹ ಪುಟ್ಟ ಜೀವಿಗಳಿಗೂ ಒಂದು ವೈಯಕ್ತಿಕ ಗುರುತು ಇದ್ದೀತೆಂಬುದೇ ನಮಗೆ ಆಶ್ಚರ್ಯಕರ ಸಂಗತಿ. ಕೆಲಸಗಾರ ಜಾತಿಯ ಎರಡು- ಇರುವೆ / ಗೆದ್ದಲು / ಜೇನುಗಳನ್ನು ಪ್ರತ್ಯೇಕವಾಗಿ ಗುರುತಿಸಲು ನಮಗೆ ಅಸಾಧ್ಯವೆನಿಸುತ್ತದೆ. ಆದರೆ ನೋಟ / ಮಾಟದಲ್ಲಿ ವೈತ್ಯಾಸವಿಲ್ಲದಿದ್ದರೇನು ಅವುಗಳ ದೇಹದ ವಾಸನೆಯಲ್ಲಿನ ಸೂಕ್ಷ್ಮ ವೈತ್ಯಾಸದ ಮೂಲಕ ಅವು ವೈಯಕ್ತಿಕ ಗುರುತನ್ನು ರೂಪಿಸಿಕೊಂಡಿರುತ್ತವೆ.

‘ವಾಸನಾ ಗುರುತು(ಅನನ್ಯ ಪರಿಮಳ)’ ಎಂಬುದು ಜೀವಿಗಳಲ್ಲಿ ಉತ್ಪತ್ತಿಯಾಗುವ ವಿಶಿಷ್ಟ ಪರಿಮಳವನ್ನು ಸೂಚಿಸುತ್ತದೆ. ಇದು ಸಾಮಾನ್ಯವಾಗಿ ಒಂದು ಜಾತಿಯ ಅಥವಾ ಆ ಜಾತಿಯ ಪ್ರತಿಯೊಂದು ಜೀವಿಯ ವಿಶಿಷ್ಟ ಲಕ್ಷಣ. ಫೆರೋಮೋನ್ಗಳಿಗಿಂತ ವಿಶಾಲವಾದ ಪರಿಕಲ್ಪನೆ ಇದಾಗಿದ್ದು, ವ್ಯಾಪಕ ಶ್ರೇಣಿಯ ರಾಸಾಯನಿಕ ಸಂಕೇತಗಳನ್ನು ಒಳಗೊಂಡಿರುತ್ತದೆ. ಒಂದು ಜೀವಿಯ ‘ವಾಸನಾ ಗುರುತು(ಅನನ್ಯ ಪರಿಮಳ)ಗೆ ಕಾರಣವೆಂದರೆ ಅದು ಸ್ರವಿಸುವ ಫೆರೋಮೋನ್ ಜೊತೆಗೆ ಇನ್ನಿತರ ವಾಸನಾಕಾರಕ ರಾಸಾಯನಿಕಗಳ ಒಂದು ವಿಶಿಷ್ಟ ಸಂಯೋಜನೆ. ಅಂದರೆ ‘ಫೆರೋಮೋನ್’ ಇದು ‘ವಾಸನಾ ಗುರುತು’ವಿನ ಉಪವಿಭಾಗವೆನ್ನಬಹುದು. ಉದಾಹರಣೆಗೆ ಇರುವೆ, ಗೆದ್ದಲು, ಜೇನುನೊಣಗಳಲ್ಲಿ ಅವು ಸ್ರವಿಸುವ ಫೆರೋಮೋನ್ಗಳೊಂದಿಗೆ ಅವುಗಳ ದೇಹದ ಮೇಲೆ ವಿವಿಧ ಹೈಡ್ರೋಕಾರ್ಬನ್ ಸಂಯುಕ್ತಗಳ ಲೇಪನವಿರುತ್ತದೆ ಇದಕ್ಕೆ ‘ಕ್ಯುಟಿಕ್ಯುಲರ್ ಹೈಡ್ರೋಕಾರ್ಬನ್(Cuticular Hydrocarbons- CHCs)’ ಎನ್ನುತ್ತಾರೆ. ಈ ಕ್ಯುಟಿಕ್ಯುಲರ್ ಹೈಡ್ರೋಕಾರ್ಬನ್ಗಳಲ್ಲಿನ ಭಿನ್ನತೆ ಅಥವಾ ಲೇಪನದ ಪ್ರಮಾಣದಲ್ಲಿನ ವೈತ್ಯಾಸದ ಮೂಲಕ ಅವು ವೈಯಕ್ತಿಕ ಭಿನ್ನತೆ(ಗುರುತು)ಯನ್ನು ಸಾಧಿಸುತ್ತವೆ. ಕೆಲಸಗಾರ ಅಥವಾ ಸೈನಿಕಹುಳುವೆಂಬ ತನ್ನ ಜಾತಿಯನ್ನು ಗುರುತಿಸಿಕೊಳ್ಳುವ ಸಾಮಾನ್ಯ ಪೇರೋಮೊನ್ಗಳ ಜೊತೆಗೆ ‘ಸಿಎಚ್ಸಿ’ ಯಲ್ಲಿನ ವೈತ್ಯಾಸವು ಅವುಗಳಿಗೆ ವೈಯಕ್ತಿಕ ಗುರುತನ್ನು ಉಂಟುಮಾಡುತ್ತದೆ.

ಹಾಗಾದರೆ ಈ ‘ವಾಸನಾ ಗುರುತು’ವಿನ ಉದ್ಧೇಶ/ಪ್ರಯೋಜನಗಳೇನೆಂಬುದನ್ನು ನೋಡೋಣ: ಫೆರೋಮೋನ್ಗಳಂತೆ ‘ವಾಸನಾ ಗುರುತಿ’ಗೆ ಕಾರಣವಾದ ವಾಸನಾಕಾರಕಗಳು ಸಜಾತೀಯ ಸದಸ್ಯರಲ್ಲಿ ಯಾವುದೇ ನಿರ್ದಿಷ್ಟ ಪ್ರತಿಕ್ರಿಯೆಯನ್ನು ಉತ್ತೇಜಿಸುವುದಿಲ್ಲ. ಬದಲಿಗೆ ಅದರ ಉಪಯೋಗಗಳು ಭಿನ್ನವಾಗಿವೆ;
ಗಡಿಸ್ವಾಮ್ಯತೆಯ ಗುರುತು(Territorial Marking): ವಾಸದ ಪ್ರದೇಶವನ್ನು ಗುರುತಿಸಲು ಪ್ರಾಣಿಯು ತನ್ನ ವಿಶಿಷ್ಟ ವಾಸನೆಯನ್ನು ಬಳಸುತ್ತದೆ. ಇದು ತಾನು ನಿರ್ದಿಷ್ಟ ಪ್ರದೇಶವನ್ನು ಆಕ್ರಮಿಸಿಕೊಂಡಿರುವ ಕುರಿತು ಇತರೆ ಪ್ರಾಣಿಗಳಿಗೆ ಸಂಕೇತಿಸುವ ಪರಿ. ಉದಾಹರಣೆಗೆ; ನಾಯಿ- ಮೂತ್ರದ ಮೂಲಕ ತನ್ನ ಮಾಹಿತಿಯನ್ನು ಇತರರಿಗೆ ಪ್ರಚುರಪಡಿಸುತ್ತದೆ. ವಾಸನೆಯು ಚೆನ್ನಾಗಿ ಪಸರಿಸುವಂತಾಗಿ ಮೂಸುವ ನಾಯಿಯ ಮೂಗಿಗೇ ನೇರವಾಗಿ ವಾಸನೆ ಬಡಿಯಲೆಂದು ಅದು ಎತ್ತರಕ್ಕೆ ಮೂತ್ರ ಸಿಂಪಡನೆಮಾಡುತ್ತದೆ! ಗಡಿಸ್ವಾಮ್ಯತೆಯು ಬೆಕ್ಕು, ತೋಳ, ಹುಲಿ ಮುಂತಾದ ಅನೇಕ ಸಸ್ತನಿಗಳಲ್ಲಿ ಸಾಮಾನ್ಯ, ಆದರೆ ಕೆಲವು ಸರೀಸೃಪಗಳು ಮತ್ತು ಕೀಟಗಳಲ್ಲಿಯೂ ಈ ಸ್ವಭಾವ ಕಂಡುಬರುತ್ತದೆ.

ಸಂಗಾತಿಯ ಆಕರ್ಷಣೆ: ಕೆಲವು ಪ್ರಭೇದಗಳು ಸಂಗಾತಿಯನ್ನು ಆಕರ್ಷಿಸಲು ತನ್ನ ವಾಸನಾ ಗುರುತನ್ನು ಬಳಸುತ್ತವೆ. ಈ ವಾಸನೆಗಳು, ಸಾಮಾನ್ಯವಾಗಿ ಫೆರೋಮೋನ್ಗಳೊಂದಿಗೆ ಕೂಡಿಕೊಂಡಿದ್ದು, ಸಂಯೋಗಕ್ಕೆ ಸನ್ನದ್ಧತೆಯನ್ನು ಸೂಚಿಸುವುದರೊಂದಿಗೆ ಸಂತಾನೋತ್ಪತ್ತಿಯ ಯಶಸ್ಸಿನಲ್ಲಿ ನಿರ್ಣಾಯಕವೂ ಆಗುತ್ತದೆ.

ವೈಯಕ್ತಿಕ ಅಥವಾ ಜಾತಿಗಳ ಗುರುತಿಸುವಿಕೆ: ಪ್ರಾಣಿಗಳು ಪರಸ್ಪರ ಗುರುತಿಸಲು ಅಥವಾ ಒಂದೇ ಜಾತಿಯ ಸದಸ್ಯರನ್ನು ಗುರುತಿಸಲು ‘ವಾಸನಾ ಗುರುತು’ ಸಹಾಯ ಮಾಡುತ್ತದೆ. ಸಾಮಾಜಿಕ ಪ್ರಾಣಿಗಳಲ್ಲಿ(ಇರುವೆ, ಗೆದ್ದಲು ಮತ್ತು ಇತರೆ) ಇದು ವಿಶೇಷ ಪ್ರಾಮುಖ್ಯತೆ ಪಡೆದಿದೆ. ಅವುಗಳಲ್ಲಿ ವಿವಿಧ ಸ್ತರಗಳ ಸಾಮಾಜಿಕ ರಚನೆಗಳನ್ನು ನಿರ್ವಹಿಸಲು ಗುಂಪಿನ ಸದಸ್ಯರನ್ನು ಗುರುತಿಸುವುದು ಅತ್ಯಗತ್ಯ. ಉದಾಹರಣೆಗೆ ರಾಣಿ, ಕೆಲಸಗಾರ ಹಾಗೂ ಸೈನಿಕಹುಳುಗಳು ಭಿನ್ನ ವಾಸನಾ ಗುರುತನ್ನು ಹೊಂದಿರುತ್ತವೆ, ಇದರಿಂದಾಗಿ ಅವುಗಳ ಸಾಮಾಜಿಕ ವ್ಯವಸ್ಥೆಯಲ್ಲಿ ಜಾತಿಗನುಗುಣವಾದ ಕೆಲಸಗಳನ್ನು ಸಂಯೋಜಿಸಲು ಸಾಧ್ಯ. ಜೊತೆಗೆ ವಾಸನಾ ಗುರುತಿಸುವಿಕೆಯಿಂದ ಅವುಗಳಿಗೆ ಇತರೆ ಗುಂಪಿನ ಪ್ರಾಣಿಯು ತನ್ನ ವಸಾಹತುವಿನ ಒಳನುಗ್ಗುವುದನ್ನು ಪತ್ತೆಹಚ್ಚಿ ತಡೆಯಲು ಕೂಡ ಅನುಕೂಲ.

ಪರಭಕ್ಷಕಗಳ ತಡೆಗಟ್ಟುವಿಕೆ(Predator Deterrence): ಕೆಲವು ಪ್ರಾಣಿಗಳು ಪರಭಕ್ಷಕಗಳನ್ನು ತಡೆಯಲು ರಕ್ಷಣಾ ಕಾರ್ಯವಿಧಾನವಾಗಿ ದುರ್ವಾಸನೆಯನ್ನು ಉತ್ಪತ್ತಿ ಮಾಡುತ್ತವೆ. ಈ ವಾಸನೆಯು ತೀಕ್ಷ್ಣ ಹಾಗೂ ಅಹಿತಕರವಾಗಿದ್ದು, ಪರಭಕ್ಷಕವು ಆಕ್ರಮಣ ಮಾಡುವ ಸಾಧ್ಯತೆಯನ್ನು ತಗ್ಗಿಸುತ್ತದೆ. ಉದಾಹರಣೆಗೆ ಸ್ಕಂಕ್, ಬಂಬಾರ್ಡಿಯರ್ ಜೀರುಂಡೆ ಹಾಗೂ ಇತರೆ ಪ್ರಾಣಿಗಳ ವಾಸನಾಯುಧದ ಕುರಿತು ಹಿಂದಿನ ಸಂಚಿಕೆಯೊಂದರಲ್ಲಿ ಬರೆಯಲಾಗಿತ್ತು.

ಪೋಷಕ-ಸಂತಾನದ ಗುರುತಿಸುವಿಕೆ: ಕೆಲವು ಜಾತಿಗಳಲ್ಲಿ, ಸಂತತಿಯು ಈ ‘ಅನನ್ಯ ಪರಿಮಳ’ ದಿಂದಾಗಿ ತನ್ನ ಹೆತ್ತವರನ್ನು ಗುರುತಿಸುತ್ತದೆ, ಹಾಗೂ ಪೋಷಕಪ್ರಾಣಿಯು ತನ್ನ ಮರಿಗಳನ್ನು ಗುರುತಿಸುವುದರೊಂದಿಗೆ ಅದರ ಪೋಷಣೆ ಹಾಗೂ ರಕ್ಷಣೆ ಮಾಡಲು ಸಹಾಯಮಾಡುತ್ತದೆ.

ಇನ್ನೂ ಸಾಕಷ್ಟು ಪ್ರಾಣಿಸಂಕುಲಗಳು ತನ್ನ ‘ವಾಸನಾ ಗುರುತನ್ನು’ ವಿವಿಧ ರೀತಿಯಲ್ಲಿ ಬಳಸಿಕೊಂಡು ಬದುಕುತ್ತಿವೆ: ಮನುಷ್ಯನಲ್ಲಿ ಕೂಡ ಆತನ ಅನನ್ಯವಾದ ಬೆರಳಚ್ಚಿನ ಹಾಗೆ ವ್ಯಕ್ತಿಗತವಾದ ‘ವಾಸನಾ ಗುರುತನ್ನು’ ಹೊಂದುವುದರ ಮೂಲಕ ಪ್ರತ್ಯೇಕತೆಯನ್ನು ಪಡೆದುಕೊಂಡಿದ್ದಾನೆ. ಬೆಕ್ಕು ಹಾಗೂ ಮಡ್ಗಾಸ್ಕರ್ ದ್ವೀಪವಾಸಿ ಸಸ್ತನಿಯಾದ ‘ಉಂಗುರ ಬಾಲದ ಲೆಮ್ಯೂರ್’ ಪ್ರಾಣಿಗಳು ವಾಸನಾಕಾರಕ ಗ್ರಂಥಿಗಳಿರುವ ತಮ್ಮ ಕೆನ್ನೆ, ಬಾಯಿಯನ್ನು ವಸ್ತುಗಳಿಗೆ ತಿಕ್ಕುವ ಮೂಲಕ ತನ್ನ ವಿಶಿಷ್ಟ ವಾಸನಾ ಗುರುತನ್ನು ಲೇಪಿಸಿ, ಗಡಿಗುರುತನ್ನು ಮಾಡುತ್ತವೆ. ಯವ್ವನಾವಸ್ಥೆಗೆ ಬಂದ ಗಂಡು ಆನೆಯು ತನ್ನ ಕೆನ್ನೆಯ ಮೇಲ್ಭಾಗದಲ್ಲಿನ ಗ್ರಂಥಿಯಿಂದ(Temporal Gland) ಸ್ರವಿಸುವುದರಮೂಲಕ ಮಸ್ತಿಗೆ ಬಂದುದರ ಸೂಚನೆಯನ್ನು ಕೊಡುತ್ತದೆ. ದನ ಹಾಗೂ ಅದರ ಕರುಗಳು- ಪರಸ್ಪರ ಗುರುತಿಸುವುದು ಉಸಿರು ಹಾಗೂ ಮೈಯಿಂದ ಹೊಮ್ಮುವ ಅನನ್ಯ ವಾಸನೆಯಿಂದ.

ನಾಯಿಯಂತೂ ಘ್ರಾಣ ಸಾಮರ್ಥ್ಯಕ್ಕೆ ಹೆಸರಾದ ಪ್ರಾಣಿ. ಅವು ತಮ್ಮ ಮಲ-ಮೂತ್ರಗಳಮೂಲಕ ತನ್ನೆಲ್ಲಾ ಮಾಹಿತಿಯನ್ನು ಸಹಚರರಿಗೆ ಪ್ರಚುರಪಡಿಸುತ್ತವೆ. ಅವುಗಳ ಗುದದ ಬಳಿ ವಾಸನಾಕಾರಕ ಗ್ರಂಥಿಗಳಿರುತ್ತವೆ. ತನ್ನ ಆಹಾರ, ಆರೋಗ್ಯ, ಲಿಂಗ, ವಾಸದ ಪ್ರದೇಶ ಇವುಗಳನ್ನಾಧರಿಸಿ ಪ್ರತಿಯೊಂದು ನಾಯಿಯೂ ಅನನ್ಯ ವಾಸನಾ ಗುರುತನ್ನು ಹೊಂದಿರುತ್ತವೆ. ಹೇಗೆ ಇಬ್ಬರು ಮನುಷ್ಯರು ಕೈಕುಲುಕಿ ಪರಸ್ಪರ ಪರಿಚಯಿಸಿಕೊಳ್ಳುತ್ತಾರೊ ಹಾಗೆ, ಎರಡು ನಾಯಿಗಳು ಸಂಧಿಸಿದಾಗ ಒಂದು ಮತ್ತೊಂದರ ಹಿಂಭಾಗವನ್ನು ಮೂಸಿ ಪರಸ್ಪರ ಮಾಹಿತಿ ಪಡೆಯುತ್ತವೆ! ಮಲ-ಮೂತ್ರ ವಿಸರ್ಜನೆಯ ಮೂಲಕ ಅದು ತನ್ನ ಗಡಿಗುರುತುಮಾಡುವುದು, ಸಂಚರಿಸುವ ದಾರಿಯ ಗುರುತು ಹಾಕುವುದು, ಸಾಮಾಜಿಕ ಸಂವಹನೆ, ಜೊತೆಗೆ ಮೂತ್ರದ ವಾಸನೆಯಲ್ಲಿ ಅದರ ಮಾನಸಿಕ ಸ್ಥಿತಿಯ(ಆತಂಕ, ಉತ್ತೇಜಿತ, ಒತ್ತಡ, ಸಂತೋಷ) ಮಾಹಿತಿಯೂ ಅಡಕವಾಗಿರುತ್ತದೆ. ಆದ್ದರಿಂದಲೇ ಕಾರಿನ ಗಾಲಿಯನ್ನು ಮೂಸಿದ ನಾಯಿಯೊಂದು- ಇಷ್ಟೆಲ್ಲಾ ಮಾಹಿತಿಯನ್ನು ಪಡೆಯುವುದರಿಂದ ಜ್ಞಾನೋದಯವಾದಂತೆ ವರ್ತಿಸುವುದು!
-ಪರಿಮಳ ಸಂದೇಶವಿನ್ನೂ ಇದೆ.

ವಿಜ್ಞಾ(ಪ)ನ“ವಾಸನಾಲಜಿ”- ಭಾಗ-೨೧“ಸುಗಂಧ ಸಾಮ್ರಾಜ್ಯ-೨”ಹಿಂದಿನ ಅಂಕಣದಲ್ಲಿ ಸುಗಂಧಗಳ ಜಾಗತಿಕ ಇತಿಹಾಸದ ಕುರಿತು ಸಂಕ್ಷಿಪ್ತವಾಗಿ ಬರೆಯಲಾಗಿತ್ತು...
21/06/2024

ವಿಜ್ಞಾ(ಪ)ನ
“ವಾಸನಾಲಜಿ”- ಭಾಗ-೨೧

“ಸುಗಂಧ ಸಾಮ್ರಾಜ್ಯ-೨”

ಹಿಂದಿನ ಅಂಕಣದಲ್ಲಿ ಸುಗಂಧಗಳ ಜಾಗತಿಕ ಇತಿಹಾಸದ ಕುರಿತು ಸಂಕ್ಷಿಪ್ತವಾಗಿ ಬರೆಯಲಾಗಿತ್ತು. ‘ಸುಗಂಧದ್ರವ್ಯ’ಗಳ ಕುರಿತು ಇಣುಕುವ ಪೂರ್ವದಲ್ಲಿ, ಭಾರತದ ಸುಗಂಧದ್ರವ್ಯ ಇತಿಹಾಸದ ಒಂದು ಪಕ್ಷಿನೋಟ ಅವಶ್ಯಕವೆನಿಸುತ್ತದೆ. ಭೌಗೋಳಿಕ, ಸಾಮಾಜಿಕ, ಹಾಗೂ ಧಾರ್ಮಿಕ ವೈವಿಧ್ಯತೆಯ ಹಿನ್ನಲೆಯಲ್ಲಿ, ಭಾರತವನ್ನು ಒಂದು ಉಪಖಂಡವೆಂದೇ ಹೇಳಲಾಗುತ್ತದೆ. ಆದ್ದರಿಂದ ಭಾರತದೇಶದ ಹಿನ್ನಲೆಯಲ್ಲಿ ಯಾವ ವಿಷಯದ ಇತಿಹಾಸವನ್ನು ಹೇಳುವುದೂ ಒಂದು ಸವಾಲಿನ ಸಂಗತಿ. ಭಾರತೀಯ ಸುಗಂಧದ್ರವ್ಯ ಇತಿಹಾಸವು- ಭಾರತದ ವೈವಿಧ್ಯಮಯ ಸಂಸ್ಕೃತಿ, ಧಾರ್ಮಿಕ ಹಾಗೂ ಸಾಮಾಜಿಕ ಆಚರಣೆಗಳೊಂದಿಗೆ ಬೆಸೆದುಕೊಂಡಿದೆ.
ಭಾರತದಲ್ಲಿ ‘ಸುಗಂಧ’- ಒಂದು ಸಾಂಸ್ಕೃತಿಕ ಲಾಂಛನ, ಅಧ್ಯಾತ್ಮಿಕ ವಾಹಕ ಹಾಗೂ ವಿವಿಧ ಕಾಲಘಟ್ಟದಲ್ಲಿ ಸಾಗುವ ಸಂವೇದನೆಯ ಒಂದು ಪಯಣ. ಆಘ್ರಾಣಿಸಲು ಉತ್ತೇಜಿಸುವ ವಿವಿಧ ಪರಿಮಳಕಾರಿಗಳಾದ ಗ್ರಂಥಿಗೆ ಸಾಮಗ್ರಿಗಳು- ಧೂಪ, ಮಡ್ಡಿ, ಕರ್ಪೂರ, ಅಗರಬತ್ತಿ, ಅತ್ತರು, ಗುಲಾಬಿನೀರು, ಶ್ರೀಗಂಧ, ಚಂದನ ಮುಂತಾದವುಗಳೆಲ್ಲಾ ಭಾರತೀಯರ ಧಾರ್ಮಿಕ ಆಚರಣೆ, ಸಂಪ್ರದಾಯಗಳಲ್ಲಿ ಹಾಸುಹೊಕ್ಕಾಗಿ ದೈನಂದಿನ ಬದುಕಿನ ಭಾಗವಾಗಿದೆ.
ಇತಿಹಾಸವು ಸರಿಯಾಗಿ ದಾಖಲಾಗಿರದ ಕಾಲಕ್ಕೂ ಪೂರ್ವದಿಂದಲೆ ಇವುಗಳ ಬಳಕೆ ರೂಢಿಗತವಾಗಿರಬಹುದೆಂದು ಭಾವಿಸಲಾಗಿದೆ. ಸಿಂಧೂನದಿಯ ನಾಗರೀಕತೆಯದ್ದೆಂದು ಹೇಳಲಾದ ‘ಟೆರ್ರಾಕೋಟ’ ಅಂದರೆ ಸುಟ್ಟ ಕೆಂಪುಮಣ್ಣಿನಿಂದ ಮಾಡಿದ ವಿವಿಧ ಪರಿಕರಗಳು ಉತ್ಖನನದಲ್ಲಿ ದೊರೆತಿವೆ, ಇವುಗಳನ್ನು ತಕ್ಷಶಿಲಾದ(ಪಂಜಾಬ್ ಪ್ರಾಂತ್ಯದ ಪಾಕಿಸ್ಥಾನದಲ್ಲಿನ) ಪ್ರಾಚ್ಯವಸ್ತುಸಂಗ್ರಹಾಲಯದಲ್ಲಿ ಇರಿಸಲಾಗಿದೆ. ಸಸ್ಯಜನ್ಯಸೌಂದರ್ಯವರ್ಧಕಗಳ (ಫೈಟೋಕಾಸ್ಮೆಟಿಕ್ಸ್) ಪಿತಾಮಹನೆಂದೆ ಖ್ಯಾತನಾದ ಇಟಲಿಯ ‘ಪ್ರೊಫೆಸರ್ ಪಾವೆಲೊ ರೊವೆಸ್ಟಿ’ಯು ತಕ್ಷಶಿಲಾಕ್ಕೆ ೧೯೭೫ರಲ್ಲಿ ಭೇಟ್ಟಿನೀಡಿದಾಗ- ಆ ಟೆರ್ರಾಕೋಟ ದಿಂದ ಮಾಡಿದ ಉಪಕರಣಗಳು ಸುಗಂಧದ್ರವ್ಯವನ್ನು ತಯಾರಿಸುವ ಆಸವನ ಉಪಕರಣ ಹಾಗೂ ಸಾರಭೂತ ತೈಲಗಳ ಸಂಗ್ರಾಹಕಗಳೆಂಬುದಾಗಿ ಗುರುತಿಸಿದ. ಕಾರ್ಬನ್ ಡೇಟಿಂಗ್ ತಂತ್ರಜ್ಞಾನದಿಂದ ಈ ಪರಿಕರಗಳು ಕ್ರಿಸ್ತಪೂರ್ವ ೩೦೦೦ನೇ ಇಸವಿಗೂ ಮೊದಲಿನವೆಂದು ಪತ್ತೆಹಚ್ಚಲಾಯ್ತು.
ವೇದ ಕಾಲ: ವೇದ ಕಾಲ(ಕ್ರಿ.ಪೂ. ೧೫೦೦–೫೦೦)ದಲ್ಲಿ, ಸುಗಂಧದ್ರವ್ಯ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ತೀವ್ರವಾಗಿ ಸಂಯೋಜಿತವಾಗಿತ್ತು. ವೇದಗಳಲ್ಲಿ, ಧಾರ್ಮಿಕ ಕಾರ್ಯಕ್ರಮಗಳು ಮತ್ತು ವೈಯಕ್ತಿಕ ಆರೈಕೆಗೆ ಶ್ರೀಗಂಧ, ಅಗಾರ್ ಮರಗಳಿಂದ ತೆಗೆದ ಹಾಗೂ ಇತರೆ ಹಲವಾರು ಸುಗಂಧದ್ರವ್ಯಗಳ ಬಳಕೆಯನ್ನು ಉಲ್ಲೇಖಿಸಲಾಗಿದೆ.

ಆಯುರ್ವೇದ: ಭಾರತೀಯ ಪಾರಂಪರಿಕ ವೈದ್ಯಕೀಯ ವ್ಯವಸ್ಥೆಯಾದ ಆಯುರ್ವೇದದಲ್ಲಿ ಸುಗಂಧದ್ರವ್ಯಗಳು ಹಾಗೂ ಸಾರಭೂತತೈಲಗಳು ಅವುಗಳ ಔಷಧೀಯ ಗುಣಗಳಿಂದಾಗಿ ವ್ಯಾಪಕವಾಗಿ ಬಳಸಲ್ಪಟ್ಟಿವೆ. ಚರಕಸಂಹಿತಾ ಮತ್ತು ಸುಶ್ರುತ ಸಂಹಿತಾ ಮುಂತಾದ ಪಠ್ಯಗಳಲ್ಲಿ ಸುಗಂಧದ್ರವ್ಯಗಳನ್ನು ಆರೋಗ್ಯ ಮತ್ತು ಸ್ವಚ್ಛತೆಗೆ ಬಳಸುವ ಕುರಿತು ವಿವರಿಸಲಾಗಿದೆ.

ವ್ಯಾಪಾರದ ಪ್ರಭಾವ: ಭಾರತ, ಮಧ್ಯಪ್ರಾಚ್ಯ ಹಾಗೂ ಪಾಶ್ಚಿಮಾತ್ಯ ದೇಶಗಳೊಂದಿಗೆ ಬೆಳೆದ ವ್ಯಾಪಾರೀ ಮಾರ್ಗಗಳಿಂದಾಗಿ(ಟ್ರೇಡ್ರೂಟ್- ರೇಷ್ಮೆದಾರಿ), ಸುಗಂಧದ್ರವ್ಯ ಹಾಗೂ ತತ್ಸಂಬಂಧಿ ತಂತ್ರಗಳ ವಿನಿಮಯವು ವ್ಯಾಪಕವಾಯ್ತು. ಭಾರತೀಯ ಪರಿಮಳದ್ರವ್ಯಗಳು, ಅತ್ತರಗಳು (ಸಾರಭೂತತೈಲಗಳು) ಬಹುಮೂಲ್ಯ ಮಾರಾಟದ ಸರಕುಗಳಾದವು. ಹತ್ತೊಂಬತ್ತನೇ ಶತಮಾನದಲ್ಲಿ ಯುರೋಪ್ ಮತ್ತು ಮಧ್ಯಪ್ರಾಚ್ಯದೊಂದಿಗೆ ವ್ಯಾಪಾರ ಮಾಡಲು ರೋಮನ್ ಸಾಮ್ರಾಜ್ಯದ ಉತ್ತುಂಗದಲ್ಲಿ ರೋಮ್ಗೆ ಐಷಾರಾಮಿ ವಸ್ತುಗಳನ್ನು ಸಾಗಿಸುವ ಹಡಗುಗಳಿಂದ ಹಿಡಿದು ಪ್ರಪಂಚದಾದ್ಯಂತ ಅಗರ್ವುಡ್, ಶ್ರೀಗಂಧ, ಕಸ್ತೂರಿ ಮತ್ತು ಇತರ ಭಾರತೀಯ ಸುಗಂಧದ್ರವ್ಯಗಳನ್ನು ವ್ಯಾಪಾರ ಮಾಡಲಾಯಿತು. ಭಾರತವು ಅಂತರಾಷ್ಟ್ರೀಯ ವೇದಿಕೆಯಲ್ಲಿ ಪ್ರಮುಖ ದೇಶವಾಗಿದ್ದು, ಅದರ ಬೃಹತ್ ವಿಸ್ತಾರ ಭೂಮಿಯ ಪರಿಮಳಗಳನ್ನು ಪ್ರಪಂಚದಾದ್ಯಂತದ ಮನೆಗಳಿಗೆ ಪಸರಿಸಲಾಯ್ತು!

ಗುಪ್ತರ ಕಾಲದಲ್ಲಿ, ಉಜ್ಜಯಿನಿಯ ಮಾಳವ ಮಹಾರಾಜನ ಆಸ್ಥಾನದಲ್ಲಿದ್ದ ವರಾಹಮಿಹಿರನು ಆರನೇ ಶತಮಾನದಲ್ಲಿ ಬೃಹತ್ಸಂಹಿತೆಯನ್ನು ಬರೆದನು, ಇದನ್ನು ಭಾರತೀಯ ಖಗೋಳಶಾಸ್ತ್ರ ಎಂದು ಕರೆಯಲಾಗುತ್ತದೆ. ಸುಗಂಧದ್ರವ್ಯಗಳ ತಯಾರಿಕೆಯನ್ನು ಬೃಹತ್ಸಂಹಿತೆಯ ಎಪ್ಪತ್ತೇಳನೇ ಅಧ್ಯಾಯದಲ್ಲಿ ವಿವರಿಸಲಾಗಿದೆ. ವಿವಿಧ ರೀತಿಯ ಸುಗಂಧದ್ರವ್ಯಗಳು, ಅವುಗಳ ನೈಸರ್ಗಿಕ ಮೂಲಗಳು, ತಯಾರಿಕೆಯ ವಿಧಾನ ಇತ್ಯಾದಿಗಳನ್ನು ಈ ಪಠ್ಯದಲ್ಲಿ “ಗಂಧಯುಕ್ತಿ” ಎಂಬ ಶೀರ್ಷಿಕೆಯಡಿಯಲ್ಲಿ ಪರಿಗಣಿಸಲಾಗಿದೆ. ಈ ಅಧ್ಯಾಯದಲ್ಲಿ ತಗರ, ಮಂಜಿಷ್ಠ, ಧೂಪ, ಸೂಕ್ತಿ, ತುರುಸ್ಕ ಮತ್ತು ಅನೇಕ ವಿಭಿನ್ನ ಪದಾರ್ಥಗಳ ಉಲ್ಲೇಖವಿದೆ. ಬೃಹತ್-ಸಂಹಿತಾದಲ್ಲಿ ವಿವಿಧ ಸೂತ್ರಗಳನ್ನು ಸಹ ಉಲ್ಲೇಖಿಸಲಾಗಿದೆ.

ಮಧ್ಯಕಾಲ: ವೆಂದು ಗುರುತಿಸಲಾದ ಮುಗಲ್ಯುಗದಲ್ಲಿ(೧೫೨೬–೧೮೫೭), ಭಾರತದ ಸುಗಂಧದ್ರವ್ಯ ಇನ್ನಷ್ಟು ಮುನ್ನಲೆಗೆ ಬಂತು. ಮುಗಲ್ ಸಾಮ್ರಾಟರು, ವಿಶೇಷವಾಗಿ ಅಕ್ಬರ್, ಜಹಾಂಗೀರ್ ಮತ್ತು ಶಹಜಹಾನ್- ಸುಗಂಧದ್ರವ್ಯದ ಅಭಿಮಾನಿಗಳಾಗಿದ್ದರು. ಈ ಸಮಯದಲ್ಲಿ ಅತ್ತರಗಳ ತಯಾರಿಕೆ ಹಾಗೂ ಬಳಕೆ ಬಹಳ ವಿಸ್ತೃತಕಲೆಯಾಗಿ ಬೆಳೆಯಿತು. ವಿವಿಧ ಹೂಗಳು, ಗಿಡಮೂಲಿಕೆ, ಹಾಗೂ ಮಸಾಲೆಪದಾರ್ಥಗಳನ್ನು ಜಲಾಸವನ ಮಾಡಿ ಗಂಧದೆಣ್ಣೆಗೆ ಸೇರಿಸಿ ಪಾರಂಪರಿಕ ಭಾರತೀಯ ಅತ್ತರುಗಳನ್ನು ತಯಾರಿಸಲಾಗುತ್ತಿತ್ತು.
ಪರಿಮಳ ಉದ್ಯಾನಗಳು: ಮುಗಲ್ ಸಾಮ್ರಾಟರು ವಿಶಾಲವಾದ ಹಾಗೂ ಕುಶಲತೆಯಿಂದ ವಿನ್ಯಾಸಗೊಳಿಸಿದ ಸುಗಂಧಕಾರಿ ಸಸ್ಯಗಳ ಉದ್ಯಾನಗಳನ್ನು (ಶಾಲಿಮಾರ್ಬಾಗ್) ರಚಿಸಿದರು.
ಅವಧ್ನ ದೊರೆ ಗಾಜಿ-ಉದ್-ದೀನ್ ಹೈದರ್ ಷಾ ತನ್ನ ಮಲಗುವ ಕೋಣೆಯ ಸುತ್ತಲೂ ಅತ್ತರ್ನ ಕಾರಂಜಿಗಳನ್ನು ಸಿದ್ಧಪಡಿಸಿಕೊಂಡಿದ್ದನು! ಮೊಘಲರ ಕಾಲದಲ್ಲಿ ಇತ್ತರ್ಗೆ ಒಲವು ಉತ್ತುಂಗಕ್ಕೇರಿತು; ಮೊಘಲರು ಗಾಂಧಿಗರಿಗೆ(ಸುಗಂಧ ತಜ್ಞರು) ಜಮೀನುಗಳನ್ನು ಮಂಜೂರು ಮಾಡಿ ಸಲುಹಿದರು, ಹಾಗೂ ಅವರಿಗೆ ಇತ್ತರ್ಗಳ ವಿವಿಧ ನೂತನ ಪ್ರಭೇದಗಳನ್ನು ಸಂಶೋಧಿಸಲು ಅವಕಾಶ ನೀಡಿದರು.

ವಸಾಹತುಶಾಹಿ ಅವಧಿ:
ಬ್ರಿಟಿಷರ ಪ್ರಭಾವ(೧೮೫೮–೧೯೪೭): ಭಾರತೀಯ ಸುಗಂಧದ್ರವ್ಯದ ಮೇಲೆ ಮಹತ್ವದ ಬದಲಾವಣೆಗಳನ್ನು ತಂದಿತು. ಪಾಶ್ಚಾತ್ಯ ಸುಗಂಧತಂತ್ರಗಳು ಹಾಗೂ ಕೃತಕಪದಾರ್ಥಗಳು ಸ್ಥಳೀಯ ಪಾರಂಪರಿಕ ಉತ್ಪಾದನೆಯಮೇಲೆ ಪ್ರಭಾವಬೀರಿದವು. ಪಾಶ್ಚಾತ್ಯ ಪರಿಮಳಗಳ ಜನಪ್ರಿಯತೆ ಭಾರತದ ಅತ್ತರಗಳ ಬೇಡಿಕೆಯನ್ನು ಕಡಿತಗೊಳಿಸಿತು. ಆದಾಗ್ಯೂ, ಉತ್ತರ ಪ್ರದೇಶದ ಕನ್ನೌಜ್ ಮುಂತಾದ ಪ್ರದೇಶಗಳಲ್ಲಿ ಅತ್ತರ ಉತ್ಪಾದನೆ ಮುಂದುವರಿಯಿತು. ಇಂದಿಗೂ ಕನೌಜ್ಅನ್ನು ‘ಭಾರತದ ಸುಗಂಧದ ರಾಜಧಾನಿ’ ಎಂದೇ ಪರಿಗಣಿಸಲಾಗುತ್ತದೆ.

ಆಧುನಿಕ ಕಾಲ:
ಪುನರುಜ್ಜೀವನ ಮತ್ತು ನಾವೀನ್ಯತೆ: ಇತ್ತೀಚಿನ ದಶಕಗಳಲ್ಲಿ, ಪಾರಂಪರಿಕ ಭಾರತೀಯ ಸುಗಂಧದ್ರವ್ಯದ ಮೇಲೆ ಪುನಃ ಆಸಕ್ತಿ ಹೆಚ್ಚುತ್ತಿದೆ. ಕಲಾವಿದರು ಪಾರಂಪರಿಕ ತಂತ್ರಗಳನ್ನು ಪುನರುಜ್ಜೀವನಗೊಳಿಸುತ್ತಾ, ಶ್ರೇಷ್ಠ ಅತ್ತರಗಳ ಆಧುನಿಕ ರೂಪಾಂತರಗಳನ್ನು ಸೃಷ್ಟಿಸುತ್ತಿದ್ದಾರೆ.

ಜಾಗತಿಕ ಪ್ರಭಾವ: ಭಾರತೀಯ ಸುಗಂಧಗಳು ಜಾಗತಿಕವಾಗಿ ಗುರುತಿಸಲ್ಪಟ್ಟಿವೆ. ಅದರಂತೆ ಲಕ್ಸುರಿ ಬ್ರಾಂಡ್ಗಳು ಭಾರತೀಯ ಸುಗಂಧ ವಸ್ತುಗಳಾದ, ಶ್ರೀಗಂಧ, ಲಾವಂಚ ಹಾಗೂ ಮಲ್ಲಿಗೆ ಮುಂತಾದವುಗಳನ್ನು ತಮ್ಮ ಉತ್ಪನ್ನಗಳಲ್ಲಿ ಬಳಸುತ್ತಿದ್ದಾರೆ.

ಸುಸ್ಥಿರತೆ: ಆಧುನಿಕ ಭಾರತೀಯ ಸುಗಂಧದ್ರವ್ಯೋದ್ಯಮವು, ಪರಿಸರದ ಮೇಲೆ ಆಗುವ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ಪಾರಂಪರಿಕ ಆಸವನ ವಿಧಾನಗಳನ್ನು ಬಳಸುವ ಮೂಲಕ ಪರಿಸರ ಸ್ನೇಹಿ ಅಭ್ಯಾಸಗಳಿಗೆ ಒತ್ತು ನೀಡುತ್ತಿದೆ.
ವಿಶಿಷ್ಟ ಭಾರತೀಯ ಸುಗಂಧದ್ರವ್ಯಗಳು ಮತ್ತು ಪದಾರ್ಥಗಳು:
ಕರ್ನಾಟಕದ ಶ್ರೀಗಂಧ: ಭಾರತೀಯ ಸುಗಂಧದ್ರವ್ಯಕ್ಕೆ ಒಂದು ಪ್ರಮುಖ ಕೊಡುಗೆಯಾಗಿದೆ, ಮೈಸೂರು ಸ್ಯಾಂಡಲ್ವುಡ್ ತೈಲವು ಅದರ ಅನನ್ಯ ಶ್ರೀಮಂತ ಪರಿಮಳಕ್ಕಾಗಿ ಪ್ರಸಿದ್ಧವಾಗಿದೆ.
ಮಲ್ಲಿಗೆ: ಸಂಬಾಕ್ ಮತ್ತು ಗ್ರ್ಯಾಂಡಿಫ್ಲೋರಮ್ ಮಲ್ಲಿಗೆಗಳೆಂಬ ತಳಿಗಳು ಭಾರತದಲ್ಲಿವೆ.
ಗುಲಾಬಿ: ಉತ್ತರ ಪ್ರದೇಶದ ಕನ್ನೌಜ್ನ ಗುಲಾಬಿಅತ್ತರ ಅದರ ಆಳವಾದ, ಸಂಕೀರ್ಣ ಪರಿಮಳಕ್ಕಾಗಿ ಪ್ರಸಿದ್ಧ.
ಲಾವಂಚ (ವೇಟಿವರ್ / ಖುಸ): ಲಾವಂಚದ ಬೇರುಗಳು ತಣ್ಣನೆಯ, ಮಣ್ಣುಪಟದ ಪರಿಮಳವನ್ನು ತಯಾರಿಸಲು ಬಳಸಲಾಗುತ್ತವೆ, ಇದು ಪಾರಂಪರಿಕ ಹಾಗೂ ಆಧುನಿಕ ಸುಗಂಧದ್ರವ್ಯಗಳೆರಡರಲ್ಲೂ ಜನಪ್ರಿಯವಾಗಿದೆ.
ಕೇತಕಿ (ಕೇವರಾ / ಪಾಂಡನಸ್) ಹೂವಿನಿಂದ ತೆಗೆಯಲ್ಪಟ್ಟ ಕೇವರಾ ಅತ್ತರ ತನ್ನ ಸಿಹಿ, ಹೂವಿನ ಪರಿಮಳಕ್ಕಾಗಿ ಪ್ರಸಿದ್ಧವಾಗಿದೆ. ಕಾಶ್ಮೀರದ ಕೇಸರಿ- ಬಣ್ಣ ಹಾಗೂ ಪರಿಮಳದಿಂದಾಗಿ ಪ್ರಪಂಚದಾದ್ಯಂತ ಪ್ರಸಿದ್ಧ.
ಜಟಾಮಾಂಸಿ ವ್ಯಾಲೆರಿಯನೇಸೀ ಕುಟುಂಬಕ್ಕೆ ಸೇರಿದ ಒಂದು ಗಿಡ ಮೂಲಿಕೆ. ‘ಸುಗಂಧ ಮಸ್ತೆ’ ಎಂದೂ ಕರೆಯುವ ಇದರ ಬೇರುಗಳು ಜಟೆ(ಡೆ)ಯಂತೆ ಇರುವುದಲ್ಲದೆ, ಸುಗಂಧಕಾರಿ ತೈಲಹೊಂದಿರುತ್ತದೆ. ಜಟೆಯಿಂದ ಬೇರ್ಪಡಿಸಿದ ಈ ಎಣ್ಣೆಯನ್ನು ಪರಿಮಳಕಾರಿಯಾಗಷ್ಟೇ ಅಲ್ಲದೆ ಶಕ್ತಿವರ್ಧಕ, ಉತ್ತೇಜಕ, ವಿರೇಚಕ ಮುಂತಾದಗುಣಗಳಿಂದ ಔಷಧಿಯಾಗಿ ಬಳಸುತ್ತಾರೆ.
ಡೊಲೊಮಿಯಾ ಕಾಸ್ಟಸ್, ಹಿಂದೆ ಸೌಸುರಿಯಾ ಕಾಸ್ಟಸ್ ಎಂದು ಕರೆಯಲಾಗುತ್ತಿತ್ತು, ಇದನ್ನು ಸಾಮಾನ್ಯವಾಗಿ ಕಾಸ್ಟಸ್, ಇಂಡಿಯನ್ ಕಾಸ್ಟಸ್, ಕುತ್ ಅಥವಾ ಪುಚುಕ್ ಎಂದು ಕರೆಯಲಾಗುತ್ತಿತ್ತು. ಕಾಶ್ಮೀರದ ಋಷಿಗಳು ವಿಶೇಷವಾಗಿ ಈ ಸಸ್ಯವನ್ನು ತಿನ್ನುತ್ತಿದ್ದರು. ಇದರ ಬೇರುಗಳಿಂದ ತೆಗೆದ ಸಾರಭೂತತೈಲಗಳನ್ನು ಪ್ರಾಚೀನ ಕಾಲದಿಂದಲೂ ಸಾಂಪ್ರದಾಯಿಕ ಔಷಧಿಗಳಲ್ಲಿ ಮತ್ತು ಸುಗಂಧದ್ರವ್ಯಗಳಲ್ಲಿ ಬಳಸಲಾಗುತ್ತಿದೆ.
ಅನೇಕ ಪರಿಮಳಯುಕ್ತ ವಸ್ತುಗಳು ಮತ್ತು ಸುಗಂಧದ್ರವ್ಯಗಳನ್ನು ಮೈಕಾಂತಿ ಹೆಚ್ಚಿಸಲು ಹಾಗೂ ಡಿಯೋಡರೆಂಟ್ ಆಗಿ ಬಳಸಲಾಗುತ್ತಿತ್ತು. ಶ್ರೀಗಂಧ, ರಕ್ತಚಂದನ, ಅಗರು, ನೀಲಗಿರಿ ಮುಂತಾದ ಗಿಡಮೂಲಿಕೆಗಳ ಎಣ್ಣೆಗಳಿಂದ ತಯಾರಿಸಬಹುದಾದ ವಿವಿಧ ಸೌಂದರ್ಯವರ್ಧಕಗಳು ಹಾಗೂ ಔಷಧಗಳ ಕುರಿತ ವಿವರಣೆಗಳು ಕೌಟಿಲ್ಯನ ಅರ್ಥಶಾಸ್ತ್ರದಲ್ಲಿಯೂ ಇರುವುದು ವಿಶೇಷ.
ಸುಗಂಧದ್ರವ್ಯಗಳ ಔಷಧೀಯ ಮೌಲ್ಯಗಳೂ ಪ್ರಾಚೀನ ಭಾರತೀಯರಿಗೆ ಚಿರಪರಿಚಿತವಾಗಿತ್ತು. ಹಾಗಾಗಿ ಈ ದ್ರವ್ಯಗಳನ್ನು ಧಾರ್ಮಿಕ ಆಚರಣೆಯಷ್ಟೇ ಅಲ್ಲದೆ ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ನೀಡಲೂ ಬಳಸಲಾಗುತ್ತಿತ್ತು. ಉದಾಹರಣೆಗೆ ಧೂಪದಿಂದ ಧೂಮೀಕರಣವನ್ನು ಔಷಧೀಯ ಉದ್ದೇಶಗಳಿಗಾಗಿ ಮಾಡುತ್ತಿದ್ದರು. ದೇಹದ ವಿವಿಧ ಭಾಗಗಳಿಗೆ ಅನುಲೇಪನ ಮಾಡಲು ಸುಗಂಧದ್ರವ್ಯಗಳನ್ನು ಬಳಸಲಾಗುತ್ತಿತ್ತು. ಬಾಯಿಯನ್ನು ಶುದ್ಧೀಕರಿಸುವ ದೃಷ್ಟಿಯಿಂದ ತಾಂಬೂಲದಲ್ಲಿ- ವೀಳ್ಯದೆಲೆ ಮತ್ತು ಅಡಿಕೆಯೊಂದಿಗೆ- ಜಾಯಿಕಾಯಿ, ಪತ್ರೆ, ಲವಂಗ, ಏಲಕ್ಕಿ, ಗುಲಾಬಿಯಿಂದ ಮಾಡಿದ ಗುಲ್ಕನ್, ಬಡೆಸೊಪ್ಪು (ಸೋಂಪ್), ಮುಂತಾದ ವಿವಿಧ ಪರಿಮಳಕಾರಿಗಳನ್ನು ಬಳಸಲಾಗುತ್ತಿದೆ. ತಾಂಬೂಲದಲ್ಲಿ ಬಳಸುವ ಪರಿಮಳಕಾರಿಗಳು ಪ್ರಾದೇಶಿಕ ವೈವಿಧ್ಯತೆಯನ್ನೂ ಹೊಂದಿದೆ. ಇವು ಬಾಯಿಯ ದುರ್ಗಂಧವನ್ನು ಹೋಗಲಾಡಿಸುವುದರೊಂದಿಗೆ, ದಂತದ ಆರೋಗ್ಯ, ಜೀರ್ಣಶಕ್ತಿ, ಮುಖದ ಸೌಂದರ್ಯ, ಲೈಂಗಿಕ ಆರೋಗ್ಯ ಇವೆಲ್ಲದರಮೇಲೂ ಪರಿಣಾಮ ಬೀರುವುದಾಗಿ ದೃಢಪಟ್ಟಿದೆ.
ದೇಹಕ್ಕೆ ಮಸಾಜ್ ಮಾಡಲು ಪರಿಮಳಯುಕ್ತ ತೈಲಗಳ ಬಳಕೆ(ಅಭ್ಯಂಗ) ಇದು ಚರ್ಮವನ್ನು ನಯವಾಗಿಸಿ, ಆರೋಗ್ಯಕರ ಹಾಗೂ ಉತ್ತೇಜಕವಾಗಿ ಇಡುತ್ತದೆ; ‘ಉದ್ವರ್ತನಂ’ ಅಂದರೆ ದೇಹದ ವಿವಿಧ ಭಾಗಗಳಿಗೆ ಮಸಾಜ್ ಮಾಡುವುದು, ‘ಉದ್ಘರ್ಶನಂ’ ಅಂದರೆ ಗಟ್ಟಿಯಾಗಿ ತಿಕ್ಕುವುದು (ಸ್ಕ್ರಬ್ಬಿಂಗ್), ‘ಉತ್ಸಾದನಂ’ ಸುವಾಸನೆಯ ಪುಡಿಗಳಿಂದ ಉಜ್ಜುವುದು. ಇವೆಲ್ಲವೂ ಆರೋಗ್ಯರಕ್ಷಣೆ ಹಾಗೂ ರೋಗ ನಿವಾರಣಾ ಕಾರ್ಯವಿಧಾನಗಳು. ಸುಗಂಧದ್ರವ್ಯಗಳು ಹಾಗೂ ಪರಿಮಳಯುಕ್ತ ಔಷಧಗಳು ಈ ಪ್ರಕ್ರಿಯೆಗಳ ಚಟುವಟಿಕೆ ಹಾಗೂ ಗುಣಮಟ್ಟಗಳನ್ನು ವರ್ಧಿಸುವುದರೊಂದಿಗೆ, ಆಹ್ಲಾದಕತೆಯನ್ನು ಉಂಟುಮಾಡುತ್ತವೆ.
ಕಾಳಿಕಾ ಪುರಾಣದಲ್ಲಿ ವಾಸನೆಗೆ ಅನುಗುಣವಾಗಿ ಹತ್ತು ಬಗೆಯ ಗಂಧದ್ರವ್ಯಗಳನ್ನು ಗುರುತಿಸಲಾಗಿರುವುದು ವಿಶೇಷ: ಇಷ್ಟಗಂಧ (ಕಸ್ತೂರಿ, ಶ್ರೀಗಂಧಗಳಂತೆ ಆಹ್ಲಾದಕರ), ಅನಿಷ್ಟಗಂಧ (ಕೆಟ್ಟ/ಕೊಳೆತ ವಾಸನೆ), ಮಧುರಗಂಧ (ಹೂಗಳ ಸಿಹಿಯ ಪರಿಮಳ), ಆಮ್ಲಗಂಧ (ಕಿತ್ತಳೆ ಜಾತಿಯ ಹುಳಿ ಪರಿಮಳ), ಕಟುಗಂಧ (ಮೆಣಸಿನ ಘಾಟುವಾಸನೆ), ಸಂಹತಗಂಧ (ವಿವಿಧ ಪರಿಮಳಗಳ ಮಿಶ್ರಣ), ಸ್ನಿಗ್ಧಗಂಧ (ತುಪ್ಪದ ಆಪ್ಯಾಯಕಾರಿ ಪರಿಮಳ), ರೂಕ್ಷಗಂಧ (ಸಾಸಿವೆ ಎಣ್ಣೆಯ ಘಾಟು ಪರಿಮಳ), ವಿಶದಗಂಧ (ಹುದುಗಿಸಿದ ಅನ್ನದ ವಾಸನೆ).
ರಾಮಾಯಣ, ಮಹಾಭಾರತ, ಕಾಳಿದಾಸನ ಕಾವ್ಯಗಳು ಮುಂತಾದ ಭಾರತೀಯ ಪುರಾಣ, ಕಾವ್ಯ, ಶಾಸ್ತçಗಳೆಲ್ಲದರಲ್ಲೂ ಸುಗಂಧದ್ರವ್ಯಗಳ ಕುರಿತು ಸಾಕಷ್ಟು ಉಲ್ಲೇಖಗಳಿವೆ.

ಕೊನೇಯದಾಗಿ ಹೇಳುವುದಾದರೆ- ಭಾರತೀಯ ಸುಗಂಧದ್ರವ್ಯ ಇತಿಹಾಸವು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಹಾಗೂ ಸುಗಂಧ ವಸ್ತುಗಳ ಪ್ರೀತಿಗೆ ಸಾಕ್ಷಿಯಾಗಿದೆ. ಪಾರಂಪರಿಕ ಆಚರಣೆಗಳಿಂದ ಆಧುನಿಕ ನಾವೀನ್ಯತೆಗಳವರೆಗೆ, ಭಾರತೀಯ ಪರಿಮಳಗಳು ತಮ್ಮ ವಿಶಿಷ್ಟ ಸಂಯೋಜನೆಯೊಂದಿಗೆ ಜನರನ್ನು ಆಕರ್ಷಿಸುತ್ತಿವೆ ಹಾಗೂ ಪ್ರೇರೇಪಿಸುತ್ತ್ತಿವೆ.

ಭಾರತ ಸರ್ಕಾರದ ಕ್ರಮಗಳು: ಭಾರತದ ಸಾಂಪ್ರದಾಯಿಕ ಸುಗಂಧದ್ರವ್ಯೋದ್ಯಮವನ್ನು ಕಾಪಾಡಲು, ಹಾಗೂ ಅತ್ತರ ಉದ್ಯಮವನ್ನು ಉತ್ತೇಜಿಸಲು- ಭಾರತ ಸರ್ಕಾರವು ೧೯೯೧ರಲ್ಲಿ ಉತ್ತರಪ್ರದೇಶದ ಕನೌಜಿನಲ್ಲಿ “ಎಫ್ಎಫ್ಡಿಸಿ” “Fragrance & Flavour Development Centre (FFDC)” ಹಾಗೂ ಸುಗಂಧಕಾರಿ ಸಸ್ಯಗಳನ್ನು ಮತ್ತು ಅವುಗಳ ಸಂಸ್ಕರಣ ವಿಧಾನಗಳನ್ನು ಉತ್ತೇಜಿಸಲು ಲಖ್ನೋದಲ್ಲಿ “ಸಿಐಎಮ್ಎಪಿ” Central Institute of Medicinal and Aromatic Plants (CIMAP) ಎಂಬ ಸಂಶೋಧನಾ ಸಂಸ್ಥೆಗಳನ್ನು ಸ್ಥಾಪಿಸಿತು. ಈ ಸಂಸ್ಥೆಗಳ ಮೂಲಕ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಅಂತೆಯೆ ಭಾರತದ ಶ್ರೀಮಂತ ಪರಿಮಳ ಪರಂಪರೆ ಅವಿಚ್ಛಿನ್ನವಾಗಿ ಸಾಗುತ್ತಿರಲಿ.

-ಸುಗಂಧವಿನ್ನೂ ಇದೆ.

Address

Vidyanagar, Post Box No. 30. Next To District Stadium
Sirsi
581402

Opening Hours

Monday 9am - 5:45am

Telephone

+918384295677

Alerts

Be the first to know and let us send you an email when Modern Education Society's M. M. Arts & Science College, Sirsi posts news and promotions. Your email address will not be used for any other purpose, and you can unsubscribe at any time.

Contact The University

Send a message to Modern Education Society's M. M. Arts & Science College, Sirsi:

Share