BLDE Association

BLDE Association Bharatiya Lingayat Development Educational Association Shri B.M. Patil, a renowned statesman, was one of the most notable custodians of the association.

Bijapur Lingayat District Education Association (BLDEA), established in 1910 by several philanthropists and visionaries who foresaw the tremendous scope and significance of education in the North Karnataka region, has today emerged as one of the foremost educational organizations in Karnataka. Since inception, BLDEA has honed and nurtured 75 educational institutions catering to the following strea

ms
Medicine
Nursing
Pharmacy
Engineering
Computer Sciences
Business Management
Education Technology
Law
Commerce
Basic Sciences
Humanities
Fine Arts
Women’s Literacy
Horticulture
Sericulture, etc. These 75 institutes can be classified as follows
With a dedicated staff exceeding 1,300 in number, BLDEA presently offers world class education to over 25,000 students in its 75 institutions replete with state-of-the-art facilities and amenities. Continuing with its tradition of educational development and advancement, BLDEA has established BLDE University (a deemed university under section 3 of the UGC Act, 1956). For BLDEA, it is a gigantic stride in terms of offering more customized and specialized educational programs to thousands of future healthcare professionals. High Schools, Pre University Colleges
Degree Colleges in Arts, Commerce And Science
Engineering College
Medical College
College of Pharmacy
College of Nursing
College of Education
Polytechnic
Hospital & Research Centre
College of Business Administration

🎓 BLDE Association Admissions 2026-27
11/05/2026

🎓 BLDE Association Admissions 2026-27

ಪ್ರತಿಷ್ಠಿತ ಬಿ.ಎಲ್.ಡಿ.ಇ. ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ವಿಶ್ವಗುರು ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಬಸವ ಜಯಂತಿಯನ್ನು ಆಚರ...
21/04/2026

ಪ್ರತಿಷ್ಠಿತ ಬಿ.ಎಲ್.ಡಿ.ಇ. ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ವಿಶ್ವಗುರು ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಬಸವ ಜಯಂತಿಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಗೌರವಾನ್ವಿತ ಸಮಕುಲಾಧಿಪತಿ ಡಾ. ವೈ. ಎಮ್. ಜಯರಾಜ, ಅವರು ಮಾತನಾಡುತ್ತ “ಕಾಯಕವೇ ಕೈಲಾಸ” ತತ್ವದ ಮಹತ್ವವನ್ನು ವಿವರಿಸಿದರು. ಬಸವಣ್ಣನವರು ಜಾತಿ ವ್ಯವಸ್ಥೆ ಮತ್ತು ಅಸ್ಪೃಶ್ಯತೆ ವಿರುದ್ಧ ನಡೆಸಿದ ಹೋರಾಟ ಹಾಗೂ ಸಮಾಜಕ್ಕೆ ನೀಡಿದ ಕೋಡುಗೆಗಳನ್ನು ಸ್ಮರಿಸಿದರು ಹಾಗೂ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಯಾದ ಶ್ರೀ ಉತ್ತಮ ಕಾಂಭಳೆಯವರು ಬಸವಣ್ಣನವರ ಭಕ್ತಗಿತೇಯನ್ನು ಹಾಡಿದರು.

ಈ ಕಾರ್ಯಕ್ರಮದಲ್ಲಿ ಕುಲಸಚಿವ ಡಾ. ಆರ್. ವಿ. ಕುಲಕರ್ಣಿ, ಪರೀಕ್ಷಾ ನಿಯಂತ್ರಣಾಧಿಕಾರಿ ಡಾ. ಎಸ್. ಎಸ್. ದೇವರಮನಿ, ವೈದ್ಯಕೀಯ ಮಹವಿದ್ಯಾಲಯದ ಪ್ರಾಚಾರ್ಯೆ ಡಾ. ತೇಜಸ್ವಿನಿ ವಲ್ಲಭ, ವೈದ್ಯಕೀಯ ನಿರ್ದೇಶಕರಾದ ಡಾ. ವಿಜಯಕುಮಾರ ಕಲ್ಯಾಣಪ್ಪಗೋಳ, ಉಪಪ್ರಾಂಶುಪಾಲರಾದ ಡಾ. ಆನಂದ ಅಂಬಲಿ, ನಿರ್ದೇಶಕರು (ಆರ್ & ಡಿ), ಡಾ. ಎಮ್. ಎಮ್. ಪಾಟೀಲ, ವೈದ್ಯಕೀಯ ಅಧೀಕ್ಷಕರಾದ ಡಾ ಎಸ್. ಎನ್. ಬೆಂಟೂರ, ಹಣಕಾಸು ಅಧಿಕಾರಿಗ ಶ್ರೀ ಬಿ. ಎಸ್. ಪಾಟೀಲ, ಪ್ಯಾಥಲಾಜಿ ವಿಭಾಗದ ಮುಖ್ಯಸ್ಥೆ, ಡಾ. ಸುರೇಖಾ ಹಿಪ್ಪರಗಿ, ಉಪಕುಲಸಚಿವ, ಶ್ರೀ ಸತೀಶ ಪಾಟೀಲ, ಸಹಾಯಕ ಕುಲಸಚಿವ, ಡಾ. ಶ್ರೀಧರ ಬಗಲಿ, ಸಹಾಯಕ ಕಾನೂನು ಅಧಿಕಾರಿ, ಶ್ರೀ ಆಯ್. ಬಿ. ಮಠಪತಿ, ಸಹಾಯಕ ಐಟಿ ವ್ಯವಸ್ಥಾಪಕ ಶ್ರೀ ಆನಂದ ಪಾಟೀಲ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಜಯಪುರದ ಬಿ.ಎಲ್.ಡಿ.ಇ ಆಸ್ಪತ್ರೆಯ, ಹೊಸ ಟ್ರಾಮಾ ಕಟ್ಟಡದ ಸಭಾಂಗಣದಲ್ಲಿ, ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್...
18/04/2026

ವಿಜಯಪುರದ ಬಿ.ಎಲ್.ಡಿ.ಇ ಆಸ್ಪತ್ರೆಯ, ಹೊಸ ಟ್ರಾಮಾ ಕಟ್ಟಡದ ಸಭಾಂಗಣದಲ್ಲಿ, ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಶಸ್ತ್ರ ಚಿಕಿತ್ಸಾ ವಿಭಾಗದ ವತಿಯಿಂದ, ಕಾಲೇಜಿನ ವೈಜ್ಞಾನಿಕ ಶೈಕ್ಷಣಿಕ ಮತ್ತು ಸಂಶೋಧನಾ ಸಮಿತಿ (SARS) ಹಾಗೂ ವಿಜಯಪುರ ಜಿಲ್ಲಾ ಶಸ್ತ್ರ ಚಿಕಿತ್ಸಕರ ಸಂಘದ ಸಹಯೋಗದೊಂದಿಗೆ “ಕ್ಯಾನ್ಸರ್ ನೊಂದಿಗೆ ಹೋರಾಟ” ಕುರಿತು ಅತಿಥಿ ಉಪನ್ಯಾಸವನ್ನು ಏರ್ಪಡಿಸಲಾಗಿತ್ತು.

ಅತಿಥಿ ಉಪನ್ಯಾಸಕರಾದ ಇಂಗ್ಲೆಂಡಿನ ಎಡಿನ್ಬರ್ಗ್ ವಿಶ್ವವಿದ್ಯಾಲಯದ ವೈದ್ಯೆ ಡಾ.ಗೀತಾ.ಶೆಟ್ಟಿ ಮಾತನಾಡುತ್ತ, “ಮೂರು ವರ್ಷಗಳ ಹಿಂದೆ ಸಾಮಾನ್ಯ ಬೇಧಿ, ಅತಿಸಾರದಿಂದ ಶುರುವಾದ ತಮ್ಮ ಕಾಯಿಲೆ ಉಲ್ಬಣಗೊಳ್ಳುತ್ತ, ಲಿವರ್ ವೈಫಲ್ಯ ಹಂತ ತಲುಪಿದರೂ, ಎಷ್ಟೇ ನವೀನ ಮಾದರಿಯ ರೋಗ ಪತ್ತೆಯ ವಿಧಾನಗಳಿಂದಲೂ ಪ್ರಾಥಮಿಕ ಕಾರಣ ತಿಳಿಯಲು ತಿಂಗಳುಗಳೇ ಬೇಕಾದವು. ತಾವು ಅತಿ ವಿರಳವಾದ ಲಿವರ್ ಮೆಟಾಸ್ಟಾಟಿಕ್ ಕಾರ್ಸಿನಾಯ್ಡ ಟ್ಯುಮರ್ ನಿಂದ ಬಳಲಿದ್ದು, ರೋಗ ಲಕ್ಷಣಗಳನ್ನು ಎಳೆ ಎಳೆಯಾಗಿ ಬಿಡಿಸಿ ಹೇಳಿದರು. ತಾವು ಅನುಭವಿಸಿದ ಶಾರೀರಿಕ, ಮಾನಸಿಕ, ಸಾಮಾಜಿಕ ವೇದನೆ ಯಾವ ಶತ್ರುಗಳಿಗೂ ಬರಬಾರದು ಎಂದು ದೇವರಲ್ಲಿ ಪ್ರಾರ್ಥಿಸುವೆ" ಎಂದು ಹೇಳಿದರು. ಭಗವದ್ಗೀತೆಯ "ಕರ್ಮಣ್ಯೇ ವಾಧಿಕಾರಸ್ತೇ ಮಾಫಲೇಶು ಕದಾಚನ" ವಾಣಿಯಂತೆ, ನಾವು ಮಾಡಿದ ನಿಷ್ಠೆ, ಪ್ರಾಮಾಣಿಕತೆ, ನಿಸ್ವಾರ್ಥ ಸತ್ಕಾರ್ಯಗಳೇ ಆಪತ್ಕಾಲದಲ್ಲಿ ನಮ್ಮನ್ನು ಕಾಪಾಡುವವು ಎಂದು ಹೇಳಿದರು. ತಮ್ಮ ಪತಿ, ಪರಿವಾರ, ಸ್ನೇಹಬಳಗದ ತಮ್ಮ ಕಷ್ಟಕಾಲದಲ್ಲಿಯ ಸೇವೆ ಸಹಕಾರ ಅನನ್ಯವಾಗಿತ್ತು ಎಂದರು. ತಮ್ಮ ಲಿವರ್ ಕಸಿ ಮತ್ತು ಇತರ ಚಿಕಿತ್ಸೆಗಳನ್ನು ಭಾರತದಲ್ಲಿಯೇ ಪಡೆದಿದ್ದು, ಭಾರತೀಯ ವೈದ್ಯಕೀಯ ಚಿಕಿತ್ಸೆ ವಿಶ್ವದಲ್ಲೇ ಶ್ರೇಷ್ಠವೆಂದರು.

ಶಸ್ತ್ರ ಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ.ಮಂಜುನಾಥ.ಕೋಟೆಣ್ಣವರ ಸಭೆಯನ್ನು ಸ್ವಾಗತಿಸಿ ಮಾತನಾಡುತ್ತ, "ಡಾ.ಗೀತಾ.ಶೆಟ್ಟಿ ತಮ್ಮ ಪಿಡಿಜೆ ಪಿ. ಯು. ಕಾಲೇಜಿನ ಹಿರಿಯ ವಿದ್ಯಾರ್ಥಿಯಾಗಿದ್ದು, ಹಿಂದೆಯೂ ಮತ್ತು ಮುಂದೆಯೂ ಎಂದೆಂದಿಗೂ ನಮಗೆ ಮಾದರಿಯಾಗಿದ್ದಾರೆ" ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಧ್ಯಾಪಕಿ ಡಾ.ವಿಜಯಾ.ಪಾಟೀಲ, ಮಾತನಾಡಿ "ಡಾ.ಗೀತಾ.ಶೆಟ್ಟಿಯವರು ಮಾದರಿ ವೈದ್ಯರೂ ಮತ್ತು ಮಾದರಿ ರೋಗಿಯೂ ಹೌದು. ಅವರ ಧೈರ್ಯ, ಇಚ್ಛಾಶಕ್ತಿ ಮತ್ತು ಸೇವಾ ಉತ್ಸುಕತೆಗಳು ಮೆಚ್ಚುವಂಥವು. ಎರಡು ವರ್ಷ ಕ್ಯಾನ್ಸರ್ ರೋಗದೊಂದಿಗೆ ಹೋರಾಡಿ ಜಯಿಸಿದ ಅವರು ವಿಶ್ವವಿಖ್ಯಾತ ಸ್ತನ ಶಸ್ತ್ರಚಿಕಿತ್ಸಕರಾಗಿದ್ದು, ವಿಜಯಪುರದ ಹೆಮ್ಮೆಯ ಸುಪುತ್ರಿ" ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಾಚಾರ್ಯೆ ಡಾ. ತೇಜಸ್ವಿನಿ.ವಲ್ಲಭ, ಹಿರಿಯ ಉಪ ಪ್ರಾಚಾರ್ಯ ಡಾ.ವಿ.ಟಿ.ಕಲ್ಯಾಣಪ್ಪಗೋಳ, ವೈದ್ಯಕೀಯ ಅಧೀಕ್ಷಕ ಡಾ.ಸಂಜೀವ.ಬೆಂಟೂರ, ಡೀನ್ ಆರ್ & ಡಿ ಡಾ.ಎಂ.ಎಂ.ಪಾಟೀಲ, ಎಸ್.ಎ.ಆರ್.ಎಸ್ ಚೇರಮನ್ ಡಾ.ಲತಾದೇವಿ ಎಚ್.ಟಿ, ,ಜಿಲ್ಲಾ ಆಸ್ಪತ್ರೆಯ ಹಿರಿಯ ಶಸ್ತ್ರ ಚಿಕಿತ್ಸಕ ಡಾ.ಆನಂದ.ಝಳಕಿ, ಡಾ.ವಿಜಯ.ಕಟ್ಟಿ, ಡಾ.ಗಿರೀಶ.ಕುಲ್ಲೊಳ್ಳಿ, ಡಾ.ವಿಕ್ರಂ.ಸಿಂದಗಿಕರ ಮತ್ತು ಸ್ನಾತಕ,ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕೊನೆಯಲ್ಲಿ ವಿಜಯಪುರ ಜಿಲ್ಲಾ ಶಸ್ತ್ರ ಚಿಕಿತ್ಸಕರ ಸಂಘದ ಕಾರ್ಯದರ್ಶಿ ಡಾ.ರಮಾಕಾಂತ.ಬಳೂರಕರ ವಂದಿಸಿದರು.

BLDEA's AVS Ayurveda Mahavidyalaya, Hospital and Research Centre, Vijayapura, in association with SABALA- Women Empowerm...
16/04/2026

BLDEA's AVS Ayurveda Mahavidyalaya, Hospital and Research Centre, Vijayapura, in association with SABALA- Women Empowerment Cell, hosted a Women's Safety Awareness Programme on April 16, 2026. 'AKKA PADE', the Police Department's initiative, collaborated on the event to promote safety and security among women.
Smt. R. K. Hoogar, Akka Pade Coordinator, led the awareness session on women's safety, which was attended by all female staff members and students.

ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ. ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ...
15/04/2026

ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ. ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಗೌರವಾನ್ವಿತ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ ಮಾತನಾಡುತ್ತ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾರತೀಯ ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರಾಗಿ ದೇಶದ ಸಂವಿಧಾನ ರಚನೆಯಲ್ಲಿ ಅಪ್ರತಿಮ ಪಾತ್ರವಹಿಸಿದ್ದಾರೆ ಎಂದು ಹೇಳಿದರು. ಅವರ ಆಳವಾದ ಕಾನೂನು ಪಾಂಡಿತ್ಯ, ಸಮಾಜದ ವಿವಿಧ ವರ್ಗಗಳ ಸಮಸ್ಯೆಗಳ ಕುರಿತು ಹೋಂದಿದ್ದ ಸೂಕ್ಷö್ಮ ಅರಿವು ಹಾಗೂ ಸಮಾನತೆಯ ಬದ್ಧತೆಯು ಭಾರತದ ಸಂವಿಧಾನವನ್ನು ವಿಶ್ವದಲ್ಲೇ ಶ್ರೇಷ್ಥ ದಸ್ತಾವೇಜುಗಳಲ್ಲಿ ಒಂದಾಗಿ ರೂಪಗೊಳ್ಳುವಂತೆ ಮಾಡಿದಾರೆ ಎಂದು ವಿವರಿಸಿದರು.
ಕುಲಪತಿ, ಡಾ. ಅರುಣ ಸಿ ಇನಾಮದಾರ ಅವರು ಮಾತನಾಡುತ್ತ ಶೈಕ್ಷಣಿಕ ಸಾಧನೆಗಳು ಮತ್ತು ಭಾರತೀಯ ಸಂವಿಧಾನ ರಚನೆಯಲ್ಲಿ ಅವರ ಅಮೂಲ್ಯ ಕೊಡುಗೆಯನ್ನು ಸ್ಮರಿಸಿದರು.

ಈ ಕಾರ್ಯಕ್ರಮದಲ್ಲಿ ಕುಲಸಚಿವ, ಡಾ. ಆರ್. ವಿ. ಕುಲಕರ್ಣಿ, ಪರೀಕ್ಷಾ ನಿಯಂತ್ರಣಾಧಿಕಾರಿ ಡಾ. ಎಸ್. ಎಸ್. ದೇವರಮನಿ, ವೈದ್ಯಕೀಯ ಮಹವಿದ್ಯಾಲಯದ ಪ್ರಾಚಾರ್ಯೆ ಡಾ. ತೇಜಸ್ವಿನಿ ವಲ್ಲಭ, ಹಿರಿಯ ಉಪಪ್ರಾಂಶುಪಾಲರಾದ ಡಾ. ವಿಜಯಕುಮಾರ ಕಲ್ಯಾಣಪ್ಪಗೋಳ, ಉಪಪ್ರಾಂಶುಪಾಲರಾದ ಡಾ. ಆನಂದ ಅಂಬಲಿ, ಡೀನ ಅಲೈಡ ಹೆಲ್ತ ಸೈನ್ಸ, ಡಾ. ಎಸ್. ವಿ. ಪಾಟೀಲ, ನಿರ್ದೇಶಕರು (ಆರ್ & ಡಿ), ಡಾ. ಎಮ್. ಎಮ್. ಪಾಟೀಲ, ವೈದ್ಯಕೀಯ ಅಧೀಕ್ಷಕರು ಡಾ. ಎಸ್. ಎನ್. ಬೆಂಟೂರ್, ಕಾನೂನು ಮಹಾವಿದ್ಯಾಲಯ, ಪ್ರಾಚಾರ್ಯರಾದ ಡಾ. ರಘುವೀರ ಕುಲಕರ್ಣಿ, ಉಪಕುಲಸಚಿವ, ಶ್ರೀ ಸತೀಶ ಪಾಟೀಲ, ಸಹಾಯಕ ಕುಲಸಚಿವ, ಡಾ. ಶ್ರೀಧರ ಬಗಲಿ, ಹಾಗೂ ವಿಶ್ವವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

11/04/2026
ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ BLDE ಸಂಸ್ಥೆಯ ನಾಲ್ವರು ವಿದ್ಯಾರ್ಥಿಗಳು ಕಲಾ ವಿಭಾಗದಲ್ಲಿ  ರ‌್ಯಾಂಕ್ ಪಡೆದು  ಬಸವನಾಡಿಗೆ ಕೀರ್ತಿ...
10/04/2026

ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ BLDE ಸಂಸ್ಥೆಯ ನಾಲ್ವರು ವಿದ್ಯಾರ್ಥಿಗಳು ಕಲಾ ವಿಭಾಗದಲ್ಲಿ ರ‌್ಯಾಂಕ್ ಪಡೆದು ಬಸವನಾಡಿಗೆ ಕೀರ್ತಿ ತಂದಿದ್ದಾರೆ. ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ವಿಜಯಪುರ ಎಸ್. ಎಸ್‌. ಪಿಯು ಕಾಲೇಜಿನ
ಸಾನಿಕಾ ಮೆಟಗಾರ ಮತ್ತು ಜಮಖಂಡಿಯ ವಾಣಿಜ್ಯ ಬಿ. ಎಚ್. ಎಸ್ ಕಲೆ ಮತ್ತು ಟಿ. ಜಿ. ಪಿ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದ
ಮ.ಅ. ನದಾಫ್ ತಲಾ 595 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ಮತ್ತು‌ ಅಂಕ ಗಳಿಸಿದ್ದಾರೆ. ವಿಜಯಪುರ ಎಸ್. ಎಸ್. ಪಿಯು ಕಾಲೇಜಿನ ಅಕ್ಷತಾ ಚವ್ಹಾಣ 594 ಅಂಕ ಪಡೆದು ರಾಜ್ಯಕ್ಕೆ ತೃತೀಯ ಹಾಗೂ ಇದೇ ಕಾಲೇಜಿನ ಯುವರಾಜ ಬಗಲಿ 593 ಅಂಕ ಪಡೆದು ರಾಜ್ಯಕ್ಕೇ ನಾಲ್ಕನೇ ರ‌್ಯಾಂಕ್ ಗಳಿಸಿದ್ದಾರೆ.
ಇವರ ಸಾಧನೆ ಇನ್ನಷ್ಟು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿ, ಬಸವನಾಡಿನ ಕೀರ್ತಿ ಮತ್ತಷ್ಟು ವಿಸ್ತಾರಗೊಳ್ಳಲಿ.

Admissions open for PU Colleges at BLDEA Vijayapura - Arts, Science & Commerce
10/04/2026

Admissions open for PU Colleges at BLDEA Vijayapura - Arts, Science & Commerce

🌍 ವಿಶ್ವ ಆರೋಗ್ಯ ದಿನ 2026: ಆರೋಗ್ಯಕ್ಕಾಗಿ ಒಟ್ಟಾಗಿ, ವಿಜ್ಞಾನದೊಂದಿಗೆ ನಿಲ್ಲು! 🔬ಇಂದು ಏಪ್ರಿಲ್ 7. ಈ ವರ್ಷದ ವಿಶ್ವ ಆರೋಗ್ಯ ದಿನವು ಒಂದು ವ...
07/04/2026

🌍 ವಿಶ್ವ ಆರೋಗ್ಯ ದಿನ 2026: ಆರೋಗ್ಯಕ್ಕಾಗಿ ಒಟ್ಟಾಗಿ, ವಿಜ್ಞಾನದೊಂದಿಗೆ ನಿಲ್ಲು! 🔬

ಇಂದು ಏಪ್ರಿಲ್ 7. ಈ ವರ್ಷದ ವಿಶ್ವ ಆರೋಗ್ಯ ದಿನವು ಒಂದು ವಿಶೇಷ ಆಶಯದೊಂದಿಗೆ ಬಂದಿದೆ. ಮನುಷ್ಯರು, ಪ್ರಾಣಿಗಳು, ಸಸ್ಯಗಳು ಮತ್ತು ನಮ್ಮ ಈ ಸುಂದರ ಗ್ರಹದ ಆರೋಗ್ಯವನ್ನು ರಕ್ಷಿಸಲು 'ವೈಜ್ಞಾನಿಕ ಸಹಯೋಗ'ವೇ ಮದ್ದು.

ಈ ವರ್ಷದ ವಿಶೇಷತೆಗಳು:

ಒಂದು ಆರೋಗ್ಯ (One Health): ಮನುಷ್ಯ ಮತ್ತು ಪ್ರಕೃತಿಯ ಆರೋಗ್ಯ ಒಂದಕ್ಕೊಂದು ಬೆಸೆದುಕೊಂಡಿದೆ ಎಂಬ ಸತ್ಯದ ಮೇಲೆ ಒತ್ತು.

ವಿಜ್ಞಾನದ ಶಕ್ತಿ: ವೈಜ್ಞಾನಿಕ ಸಾಧನೆಗಳನ್ನು ಕೇವಲ ಪ್ರಯೋಗಾಲಯಕ್ಕೆ ಸೀಮಿತಗೊಳಿಸದೆ, ಅವುಗಳನ್ನು ಜನರ ಜೀವನದಲ್ಲಿ ಅಳವಡಿಸಿಕೊಳ್ಳುವುದು.

ಜಾಗತಿಕ ಸಹಕಾರ: ದೇಶಗಳ ನಡುವಿನ ಭಿನ್ನಾಭಿಪ್ರಾಯ ಮರೆತು ಆರೋಗ್ಯಕ್ಕಾಗಿ ಒಂದಾಗುವುದು.

ಬನ್ನಿ, ವಿಜ್ಞಾನದ ಮೇಲೆ ನಂಬಿಕೆಯನ್ನಿಡೋಣ ಮತ್ತು ಉತ್ತಮ ಭವಿಷ್ಯಕ್ಕಾಗಿ ಕೈಜೋಡಿಸೋಣ! 🤝

#ವಿಶ್ವಆರೋಗ್ಯದಿನ #ವಿಜ್ಞಾನದೊಂದಿಗೆನಿಲ್ಲು

06/04/2026

Address

Bangaramma Campus Solapur Road
Bijapur
586101

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm

Website

https://www.youtube.com/@BLDEAssociationVijayapura

Alerts

Be the first to know and let us send you an email when BLDE Association posts news and promotions. Your email address will not be used for any other purpose, and you can unsubscribe at any time.

Contact The University

Send a message to BLDE Association:

Share